Connect with us

    LATEST NEWS

    ಕಟೀಲು ಪರಿಸರದಲ್ಲಿ ಚಿರತೆ ಹಾವಳಿ…

    ಮಂಗಳೂರು ಜುಲೈ 31: ಮಂಗಳೂರು ಹೊರವಲಯದ ಕಟೀಲು ಪರಿಸರದಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿದೆ. ಶ್ರೀ ಕ್ಷೇತ್ರ ಕಟೀಲು ಸಮೀಪದ ಎಕ್ಕಾರಿನಲ್ಲಿ ಮನೆಯಂಗಳಕ್ಕೆ ಚಿರತೆ ಬಂದು ನಾಯಿಯನ್ನು ಒಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.


    ಬಡಗ ಎಕ್ಕಾರು ನಿವಾಸಿ ಸ್ಟ್ಯಾನಿ ಪಿಂಟೋ ಅವರ ಮನೆಗೆ ಬಧವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಬಂದಿದ್ದ ಚಿರತೆ ನಾಯಿಯನ್ನು ಹಿಡಿದು ಕೊಂಡೊಯ್ದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸುಮಾರು ಆರು ತಿಂಗಳ ಹಿಂದೆಯೂ ಇದೇ ಮನೆಯಿಂದ ನಾಯಿಯನ್ನು ಚಿರತೆ ಕೊಂಡೊಯ್ದಿದ್ದು, ಇದೀಗ ಎರಡನೆ ಬಾರಿಗೆ ಮತ್ತೊಂದು ನಾಯಿಯನ್ನು ಕೊಂಡೊಯ್ದಿದೆ. ಕಳೆದ ಕೆಲ ದಿನಗಳ ಹಿಂದೆ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಟ್ಟಕೋಡಿ, ಮುಲ್ಲೊಟ್ಟು, ಪದ್ಮನ್ನೂರು ಪರಿಸರದಲ್ಲಿ ಚಿರತೆ ಹಾವಳಿ ಇದ್ದು ಅನೇಕ ನಾಯಿಗಳನ್ನು ತಿಂದು ಹಾಕಿದೆ ಎಂದು ಹೇಳಲಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply