LATEST NEWS
ಕುಂದಾಪುರ – ಹಾರ್ಡವೇರ್ ಅಂಗಡಿಗೆ ಬೆಂಕಿ – ಕೊಟ್ಯಾಂತರ ನಷ್ಟ
ಉಡುಪಿ ಡಿಸೆಂಬರ್ 26: ಹಾರ್ಡ್ ವೇರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಕುಂದಾಪುರದ ಮುಳ್ಳಿಕಟ್ಟೆ ಎಂಬಲ್ಲಿ ನಡೆದಿದೆ. ಮುಳ್ಳಿಕಟ್ಟೆಯ ನಿವಾಸಿ ಹರೀಶ್ ಜೋಗಿ ಎಂಬವರಿಗೆ ಸೇರಿರುವ ಬೆನಕ ಹಾರ್ಡ್ವೇರ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿದೆ.
ನಿನ್ನೆ ರಾತ್ರಿ ಅಂಗಡಿಯೊಳಗಿಂದ ಶೆಟರ್ ಮೂಲಕ ಹೊಗೆ ಬರುತ್ತಿರುವುದನ್ನು ಮಾಲಕರು ಗಮನಿಸಿದ್ದಾರೆ. ಅಂಗಡಿಯ ಬೀಗ ಒಡೆದು ಶಟರ್ ತೆಗೆಯುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಂಗಡಿಯೊಳಗಿದ್ದ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ಕಂಟೆಂಟ್ ಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆಗೆ ಹಾರ್ಡ್ ವೇರ್ ಅಂಗಡಿಗೆ ತಾಗಿಕೊಂಡಿದ್ದ ಮೆಡಿಕಲ್ ಶಾಪ್ ಹಾಗೂ ಇತರ ಅಂಗಡಿಗಳಿಗೂ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ಅಸ್ಪಷ್ಟವಾಗಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login