LATEST NEWS
ಅಗಸ್ಟ್ 25 ಮತ್ತು 26 ರಂದು ನಡೆಯಬೇಕಿದ್ದ ಕೆಎಸ್ ಆರ್ ಟಿಸಿ ಪರೀಕ್ಷೆ ಮುಂದೂಡಿಕೆ
ಅಗಸ್ಟ್ 25 ಮತ್ತು 26 ರಂದು ನಡೆಯಬೇಕಿದ್ದ ಕೆಎಸ್ ಆರ್ ಟಿಸಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು ಅಗಸ್ಟ್ 23: ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಅಗಸ್ಟ್ 25 ಮತ್ತು 26 ರಂದು ನಡೆಯಬೇಕಿದ್ದ ಕೆಎಸ್ಆರ್ ಟಿಸಿ ಮೇಲ್ವಿಚಾರಕೇತರ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಜನಪ್ರತಿನಿಧಿಗಳು ಹಾಗೂ ಸಾಕಷ್ಟು ಪರೀಕ್ಷಾರ್ಥಿಗಳು ಲಿಖಿತ ಪರೀಕ್ಷೆಯನ್ನು ಮುಂದೂಡುವಂತಕೆ ಮನವಿ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಮನವಿಯನ್ನು ಪರಿಗಣಿಸಿ ಲಿಖಿತ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷೆಯ ದಿನಾಂಕವನ್ನು ಸಂಸ್ಥೆಯ ವೆಬ್ ಸೈಟ್ www.ksrtcjobs.com ನಲ್ಲಿ ತಿಳಿಸಲಾಗುವುದು ಎಂದು ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You must be logged in to post a comment Login