KARNATAKA
ಇಲ್ಲಿ ಆ ವುಡ್ ಈ ವುಡ್ ಎಂಬ ಪ್ರಶ್ನೆ ಇಲ್ಲ: ಕೋಟ
ಉಡುಪಿ: ಮಾದಕ ದ್ರವ್ಯದ ಸೇವನೆ, ಮಾರಾಟ ವಿಚಾರ ಗೃಹ ಸಚಿವ ಬೊಮ್ಮಾಯಿ ಕಟುವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ.ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಪರವಾಗಿಲ್ಲ ಮಾದಕ ದ್ರವ್ಯದ ಜಾಡನ್ನು ಮಟ್ಟ ಹಾಕುತ್ತೇವೆ, ಮಾದಕ ದ್ರವ್ಯದ ಜಾಲವನ್ನ ಮಟ್ಟ ಹಾಕುತ್ತೇವೆ. ರಾಜ್ಯ ಸರ್ಕಾರ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ.
ಇಲ್ಲಿ ಆ ವುಡ್ ಈ ವುಡ್ ಎಂಬ ಪ್ರಶ್ನೆ ಬರುವುದಿಲ್ಲ ಗೃಹಸಚಿವರ ಕಠಿಣ ನಿರ್ಧಾರವನ್ನ ಇಡೀ ಮಂತ್ರಿಮಂಡಲ ಬೆಂಬಲಿಸುತ್ತದೆ. ಡ್ರಗ್ಸ್ ವಿಚಾರದಲ್ಲಿ ವ್ಯಕ್ತಿಗಳು ಗೌಣ ವಿಚಾರ ಅಷ್ಟೇ ಮುಖ್ಯ ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರುವುದಿಲ್ಲ.
ರಾಜ್ಯ ಬಿಜೆಪಿ ಸರ್ಕಾರ ವಿಷಯಗಳ ಮೇಲೆ ಹೋಗುತ್ತದೆ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು
ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ.
You must be logged in to post a comment Login