LATEST NEWS
ಕೊಂಕಣ್ ರೈಲ್ವೆ ಸುರಂಗಕ್ಕೆ ಹಾನಿ – ರೈಲು ಸಂಚಾರದಲ್ಲಿ ವ್ಯತ್ಯಯ
ಮಂಗಳೂರು ಅಗಸ್ಟ್ 09: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣ ರೈಲ್ವೆಯ ಕಾರವಾರ ವಿಭಾಗದ ಪ್ರೆನೆಮ್ ಸುರಂಗದ ಗೋಡೆಗಳಿಗೆ ಹಾನಿಯಾದ ಪರಿಣಾಮ ಗೋವಾ ಹಾಗೂ ದಕ್ಷಿಣಕ್ಕೆ ತೆರಳುವ ರೈಲು ಓಡಾಟಕ್ಕೆ ಸಮಸ್ಯೆ ಎದುರಾಗಿದೆ.
1.5 ಕಿ.ಮೀ.ಉದ್ದದ ಸುರಂಗದ ಸುಮಾರು 10 ಮೀಟರ್ ಅಳತೆಯ ಗೋಡೆಯ ಒಂದು ಭಾಗವು ಕುಸಿದುಬಿದ್ದಿದೆ. ಈ ಸುರಂಗವನ್ನು 1998ರಲ್ಲಿ ನಿರ್ಮಿಸಲಾಗಿತ್ತು. ಭಾರೀ ಮಳೆಯ ಬಳಿಕ ಆಗಸ್ಟ್ 6ರಂದು ಸುರಂಗದ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು..
ದುರಸ್ತಿ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಮಳೆ ಅಡ್ಡಿಯಾಗಿದೆ.”ಮಳೆಯಿಂದಾಗಿ ನಿರಂತರವಾಗಿ ಸ್ಥಗಿತಗೊಳ್ಳುತ್ತಿರುವ ರೈಲು ಸಂಚಾರ ಪುನರ್ ಆರಂಭಗೊಳ್ಳಲು ಇನ್ನು ಎರಡು ವಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೊಂಕಣ ರೈಲ್ವೇ ಮಾಹಿತಿ ನೀಡಿದೆ.
ತಿರುವನಂತಪುರ ಹಾಗೂ ಎರ್ನಾಕುಲಂಗೆ ತೆರಳುವ ಕನಿಷ್ಠ 8 ರೈಲುಗಳನ್ನು ಪುಣೆ-ವಿರಾಜ್ ಮೂಲಕ ತಿರುಗಿಸಿ ಮಡ್ಗಾಂವ್ ತಲುಪಲು ಹಾಗೂ ದಕ್ಷಿಣಕ್ಕೆ ಹೋಗಲು ಬದಲಿ ವ್ಯವಸ್ಥೆ ಮಾಡಲಾಗಿದೆ
You must be logged in to post a comment Login