Connect with us

    LATEST NEWS

    ಕೊಂಚಾಡಿ ಕಾಶೀ ಮಠದಲ್ಲಿ ಚಂಡಿಕಾ ಹವನ

    ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ನಲ್ಲಿದ್ದು ಈ ಪ್ರಯುಕ್ತ ಶ್ರೀ ದೇವಳದಲ್ಲಿ ” ಚಂಡಿಕಾ ಹವನ ” ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.

    ಪ್ರಾತಃ ಕಾಲ ಸಂಸ್ಥಾನದ ದೇವರ ನೈರ್ಮಾಲ್ಯ ಪೂಜೆ ನಡೆದ ಬಳಿಕ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು . ಈ ಸಂದರ್ಭದಲ್ಲಿ ವೇದ ಮೂರ್ತಿ ಎಚ್ . ಯೋಗೀಶ್ ಭಟ್ , ಸತೀಶ್ ಪೈ , ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಡಿ . ವಾಸುದೇವ ಕಾಮತ್ , ಜಿ . ರತ್ನಾಕರ್ ಕಾಮತ್ , ಶಶಿಧರ್ ಪೈ ಮಾರೂರ್ , ಸೂರಜ್ ಕಾಮತ್, ದೀಪಕ್ ಕುಡ್ವ , ಪ್ರಶಾಂತ್ ಪೈ , ಅನಿಲ್ ಕಾಮತ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .


    ಚಿತ್ರ : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply