Connect with us

    LATEST NEWS

    ಉಡುಪಿ – ಕೊಲ್ಲೂರು ಯಾತ್ರಾರ್ಥಿಗಳಿದ್ದ ಬಸ್ ಪಲ್ಟಿ ಹಲವರಿಗೆ ಗಾಯ

    ಉಡುಪಿ ಜನವರಿ 12:ಕೊಲ್ಲೂರು ಯಾತಾರ್ಥಿಗಳಿಂದ ಬಸ್ ಪಲ್ಟಿಯಾಗಿ ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.   ಇಬ್ಬರು ಮಹಿಳೆಯರ ಕೈ ತುಂಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.


    ಕೊಲ್ಲೂರು ಸಮೀಪದ ದಳಿ ತಿರುವಿನ ಬಳಿ ಈ ಘಟನೆ ನಡೆದಿದೆ. ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಘಟನೆಯಲ್ಲಿ  ಕೈಗಳನ್ನು ಕಳೆದುಕೊಂಡ ಮಹಿಳೆಯರನ್ನು ಶ್ಯಾಮಲಮ್ಮ (48) ಹಾಗೂ ರೂಪಾ (49) ಎಂದು ಗುರುತಿಸಲಾಗಿದೆ. ಶ್ಯಾಮಲಮ್ಮ ಅವರನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರೂಪಾ ಅವರು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

    ಇನ್ನುಳಿದ ನಾಲ್ವರನ್ನು ಶಂಕರಪ್ಪ (50), ರತ್ನಮ್ಮ (52), ವೆಂಕಟರಮಣ (45) ಮತ್ತು ಚಂದ್ರಕಲಾ (42) ಎಂದು ಗುರ್ತಿಸಲಾಗಿದೆ. ನಾಲ್ವರೂ ಕೋಲಾರ ಜಿಲ್ಲೆಯ ನಿವಾಸಿಗಳಾಗಿದ್ದು, ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ಗಾಯಾಳುಗಳೆಲ್ಲರೂ ಕೋಲಾರದಿಂದ ಕೊಲ್ಲೂರಿಗೆ ಯಾತ್ರೆ ಹೊರಟಿದ್ದ ತಂಡದಲ್ಲಿದ್ದವರಾಗಿದ್ದು, ಕೊಲ್ಲೂರಿಗೆ ತೆರಳುವ ಮುನ್ನ ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರೆಂದು ವರದಿಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply