LATEST NEWS
ಹಿರಿಯಡ್ಕ ಕಿಶನ್ ಹೆಗ್ಡೆ ಕೊಲೆ ಪ್ರಕರಣ – ಮನೋಜ್ ಕೋಡಿಕೆರೆ ಸಹಿತ ಐವರ ಆರೆಸ್ಟ್
ಉಡುಪಿ ಸೆಪ್ಟೆಂಬರ್ 26: ರಿಯಲ್ ಎಸ್ಟೇಟ್ ಉದ್ಯಮಿ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನೋಜ್ ಕೊಡಿಕೆರೆ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಉಂಟಾದ ಹಣಕಾಸಿನ ವೈನಸ್ಸಿನ ಕಾರಣದಿಂದಾಗಿ ಈ ಘಟನೆ ನಡೆದಿದ್ದು, ಪೊಲೀಸರು ಈಗಾಗಲೇ ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಿಶನ್ ಹೆಗ್ಡೆ ಅಂದು ಮಂಗಳೂರಿನ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಅವರ ಜೊತೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಿದ್ದ. ಆದರೆ, ಕಾರಿನಿಂದ ಇಳಿಯುವ ವೇಳೆ ಬೆನ್ನಟ್ಟಿ ಬಂದಿದ್ದ ರೌಡಿಗಳ ತಂಡ ಅಡ್ಡಗಟ್ಟಿದೆ. ಮಾರಕಾಯುಧಗಳ ಜೊತೆ ಬಂದಿದ್ದ ತಂಡ, ಕಿಶನ್ ಹೆಗ್ಡೆ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ 4-5 ಮಂದಿ ಸೇರಿ ಕಿಶನ್ ಹೆಗ್ಡೆ ಕಾರಿನಿಂದ ಇಳಿಯುತ್ತಿದ್ದಾಗಲೇ ತಲವಾರಿನಿಂದ ಕಡಿದಿದ್ದಾರೆ. ಕಿಶನ್ ಹೆಗ್ಡೆ ಜತೆಯಲ್ಲಿದ್ದ ಹರಿಪ್ರಸಾದ್ ತಲೆಗೂ ಏಟು ಬಿದ್ದಿತ್ತು.
ರೌಡಿಶೀಟರ್ಗಳಾದ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಇತ್ತು. ಇದೇ ವೈಷಮ್ಯದಲ್ಲಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ. ಕೊಲೆಯ ಬಳಿಕ ರೌಡಿಗಳು ತಾವು ಬಂದಿದ್ದ ರಿಡ್ಜ್ ಹಾಗೂ ಇನೋವಾದಲ್ಲಿ ಪಲಾಯನ ಆಗಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿ ಪತ್ತೆಯಾಗಿತ್ತು.
You must be logged in to post a comment Login