LATEST NEWS
ಮಗಳಿಗೆ ವಿಶೇಷ ಬರ್ತಡೇ ಗಿಫ್ಟ್ ನೀಡಿದ ಮಾಜಿ ಸಚಿವ ಯು.ಟಿ ಖಾದರ್
ಮಗಳಿಗೆ ವಿಶೇಷ ಬರ್ತಡೇ ಗಿಫ್ಟ್ ನೀಡಿದ ಮಾಜಿ ಸಚಿವ ಯು.ಟಿ ಖಾದರ್
ಮಂಗಳೂರು ಸಪ್ಟೆಂಬರ್ 12: ಮಾಜಿ ಸಚಿವ ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ತಮ್ಮ ಮಗಳ ಬಹುದಿನದ ಕನಸನ್ನು ನನಸಾಗಿಸುವ ಮೂಲಕ ಸ್ಪೆಷಲ್ ಹುಟ್ಟುಹಬ್ಬದ ಗಿಫ್ಟ್ ನ್ನು ನೀಡಿದ್ದಾರೆ.
ಯು.ಟಿ. ಖಾದರ್ ಅವರ ಒಬ್ಬಳೆ ಮಗಳು ಹವ್ವ ನಸೀಮಾ ಅವರ ಬರ್ತಡೇ ಅಗಸ್ಟ್ 22 ರಂದು ಪ್ರತಿವರ್ಷ ತಂದೆ ಯು.ಟಿ.ಖಾದರ್ ಹವ್ವ ಬರ್ತ್’ಡೇಗೆ ಏನು ಬೇಕೆಂದು ವಿಚಾರಿಸುತ್ತಿದ್ದರು. ಆಕೆ ಪವಿತ್ರ ಮಕ್ಕಾ ಯಾತ್ರೆ ಅಥವಾ ಬೇರೆ ಯಾವುದಾದರೂ ಧಾರ್ಮಿಕ ಹಿನ್ನೆಲೆಯ ಗಿಫ್ಟ್ ಕೇಳುತ್ತಿದ್ದಳು. ಆದರೆ ಈ ವರ್ಷದ ಜನ್ಮದಿನಕ್ಕೆ ಸುಧಾಮೂರ್ತಿಯವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು. ಪುತ್ರಿಯ ಬೇಡಿಕೆಯನ್ನು ಯು.ಟಿ.ಖಾದರ್ ಈಡೇರಿಸುವ ಭರವಸೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಸುಧಾಮೂರ್ತಿಯವರ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಿವಾಸಕ್ಕೆ ಯು.ಟಿ.ಖಾದರ್ ತನ್ನ ಮಗಳನ್ನು ಕರೆದುಕೊಂಡು ಹೋಗಿ ಅವಳ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ.
ಖಾದರ್ ಅವರ ಪುತ್ರಿ ಹವ್ವಳಿಗೆ ಅವರ ಪುಸ್ತಕ ಅಂದರೆ ಪಂಚಪ್ರಾಣ. ಸುಧಾಮೂರ್ತಿ ಅವರು ಬರೆದ ಅಥವಾ ಅವರ ಬಗ್ಗೆ ಪ್ರಕಟವಾದ ಪುಸ್ತಕ, ಲೇಖನಗಳನ್ನು ಹವ್ವ ನಸೀಮಾ ಆಸಕ್ತಿಯಿಂದ ಓದುತ್ತಿದ್ದರು.
ಹವ್ವ ಅವರು ಸುಧಾಮೂರ್ತಿ ಅವರ ಬಗ್ಗೆ ಆಸಕ್ತಿ ಇರುವುದು ಹೆತ್ತವರಿಗೆ ಗೊತ್ತಿರಲಿಲ್ಲ. ಒಂದಿನ ವಿಮಾನ ನಿಲ್ದಾಣದಲ್ಲಿ ಸುಧಾಮೂರ್ತಿಯವರ ಸಾಹಿತ್ಯ ಪುಸ್ತಕವನ್ನು ಹವ್ವ ಎತ್ತಿಕೊಂಡು ಓದುವಾಗ ತಂದೆ ಯು.ಟಿ.ಖಾದರ್ ಮಗಳನ್ನು ಕುತೂಹಲದಿಂದ ವಿಚಾರಿಸಿದರು. ಸುಧಾಮೂರ್ತಿಯನ್ನು ಭೇಟಿಯಾಗಬೇಕೆಂಬ ಅದಮ್ಯ ಬಯಕೆ ಹೊಂದಿದ್ದ ಪುತ್ರಿಯ ಕನಸನ್ನು ಯು.ಟಿ.ಖಾದರ್ ಬುಧವಾರ ಈಡೇರಿಸಿದ್ದಾರೆ.
You must be logged in to post a comment Login