LATEST NEWS
ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಹೋದಾಗ ತಡೆದ ಪತ್ನಿಯನ್ನೇ ಕೊಂದ ಪತಿ….!!
ತಿರುವನಂತಪುರಂ: ಮಗುವಿಗೆ ಮುತ್ತು ಕೊಡುವ ವಿಚಾರಕ್ಕೆ ಕೇರಳದಲ್ಲಿ ಕೊಲೆಯೇ ನಡೆದಿರುವ ಘಟನೆ ನಡೆದಿದೆ. ಕೇರಳದ ಪಾಲಕ್ಕಾಡ್ ನಲ್ಲಿ ಈ ಘಟನೆ ನಡೆದಿದ್ದು, ಹಲ್ಲುಜ್ಜದೇ ತಮ್ಮ ಪುಟ್ಟ ಮಗುವಿಗೆ ಮುತ್ತಿಡಲು ಬಂದ ಪತಿಯನ್ನು ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.
ಆರೋಪಿಯನ್ನು ಅವಿನಾಶ್ ಎಂದು ಗುರುತಿಸಲಾಗಿದ್ದು, ಕೊಲೆಯಾದವರನ್ನು ಅವಿವಾಶ್ ಪತ್ನಿ ದಿಪೀಕಾ ಎಂದು ಗುರುತಿಸಲಾಗಿದೆ. ಅವಿನಾಶ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎರಡು ತಿಂಗಳ ಹಿಂದೆ ಪಾಲಕ್ಕಾಡ್ ಗೆ ಬಂದಿದ್ದರು.
ಬೆಳಿಗ್ಗೆ ಹಲ್ಲುಜ್ಜದೆ ಮಗುವಿಗೆ ಮುತ್ತು ನೀಡಲು ಅವಿನಾಶ್ ಮುಂದಾದಾಗ ಇದನ್ನು ದಿಪೀಕಾ
ವಿರೋಧಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರ ಮಾತು ಆಕ್ರೋಶಕ್ಕೆ ತಿರುಗಿದ್ದು, ಪತಿ ಅವಿನಾಶ್ ಚಾಕುವಿನಿಂದ ದೀಪಿಕಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯೆ ಚೀರಾಟ ಕೇಳಿದ ಸ್ಥಳೀಯರು ದೀಪಿಕಾಳ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಅವಿನಾಶ್ನನ್ನು ವಶಕ್ಕೆ ಪಡೆದಿದ್ದಾರೆ.
You must be logged in to post a comment Login