LATEST NEWS
ಕಟಪಾಡಿ – ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ
ಉಡುಪಿ ಅಗಸ್ಟ್ 18: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯಲ್ಲಿ ನಿಂತಿದ್ದ ಕಾರು ಹಾಗೂ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಅಂಗಡಿಗೆ ನುಗ್ಗಿ ಸರಣಿ ಅಪಘಾತ ನಡೆದ ಘಟನೆ ಕಟಪಾಡಿ ಪೇಟೆಯಲ್ಲಿ ನಡೆದಿದೆ.
ಬಂಟಕಲ್ಲು ಬಿಸಿ ರೋಡ್ ಉದ್ಯಮಿ ಸಿರಿಲ್ ಕ್ವಾಡ್ರಸ್ ಎಂಬವರು ಚಲಾಯಿಸುತ್ತಿದ್ದ ಮಹೀಂದ್ರ ಎಕ್ಸ್ ಯು ವಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರು ಮತ್ತು ಸ್ಕೂಟರಿಗೆ ಡಿಕ್ಕಿಹೊಡೆದು ಸಮೀಪದ ಚಿಕನ್ ಟಿಕ್ಕಾ ಅಂಗಡಿಗೆ ನುಗ್ಗಿದೆ.
ಘಟನೆಯಲ್ಲಿ ಜೆನ್ ಕಾರು ಪೂರ್ಣ ನುಜ್ಜುಗುಜ್ಜಾಗಿದ್ದು ಸ್ಕೂಟರ್ ಮತ್ತು ಮಹೀಂದ್ರ ಕಾರು ಜಖಂಗೊಂಡಿದೆ. ಅಂಗಡಿಯೊಳಗಿದ್ದ ಸಿಬಂದಿ ಹಾಗೂ ಗ್ರಾಹಕ ಭುವನೇಶ್ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.
You must be logged in to post a comment Login