Connect with us

    LATEST NEWS

    ಕಾಸರಗೋಡು – ಮಂಗಳೂರು ಸಂಚಾರಕ್ಕೆ ಸಿಗದ ಸ್ಪಂದನೆ ಬಿಜೆಪಿಯಿಂದ ಪ್ರತಿಭಟನೆಗೆ ಸಿದ್ದತೆ

    ಕೇಂದ್ರ ಸರಕಾರದ ಆದೇಶ ಇದ್ದರೂ ಜಿಲ್ಲಾಡಳಿತಗಳ ತಿಕ್ಕಾಟ

    ಮಂಗಳೂರು, ಜೂನ್ 6:  ಕಾಸರಗೋಡು – ಮಂಗಳೂರು ಮಧ್ಯೆ ಓಡಾಡಕ್ಕೆ ಪಾಸ್ ವ್ಯವಸ್ಥೆ ಆಗದಿರುವುದನ್ನು ಖಂಡಿಸಿ ಕಾಸರಗೋಡು ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

    ಕಾಸರಗೋಡಿನಿಂದ ನಿತ್ಯ ಸಾವಿರಾರು ಜನ ಮಂಗಳೂರಿಗೆ ಬರುತ್ತಿದ್ದು ಲಾಕ್ ಡೌನ್ ಕಾರಣದಿಂದ ಉದ್ಯೋಗ ಇಲ್ಲದೆ ಸಂಕಷ್ಟ ಅನುಭವಿಸಿದ್ದಾರೆ‌. ಈಗ ಜೂನ್ 1ರಿಂದ ಕೇಂದ್ರ ಸರಕಾರ ಅಂತಾರಾಜ್ಯ ಸಂಪರ್ಕ ತೆರೆಯಲು ಹಸಿರು ನಿಶಾನೆ ನೀಡಿದ್ದರೂ, ಕೇರಳ ಮತ್ತು ಕರ್ನಾಟಕದ ಆಡಳಿತಗಳು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಜನರ ಆಗ್ರಹಕ್ಕೆ ಮಣಿದು ಕಾಸರಗೋಡು ಜಿಲ್ಲಾಡಳಿತ ಪಾಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರೂ, ಅದು ಜನರಿಗೆ ಲಭ್ಯವಾಗುತ್ತಿಲ್ಲ.

    ಕೆಲವರಿಗೆ ಪಾಸ್ ಸಿಕ್ಕಿದರೂ, ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಮಾನ್ಯ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಾಸ್ ಬೇಕೆಂದು ಗಡಿಯಲ್ಲಿ ಇರುವ ಪೊಲೀಸರು ಸತಾಯಿಸುತ್ತಾರೆ. ಇದರಿಂದ ಬೇಸತ್ತ ಜನರು ತಲಪಾಡಿ ಗಡಿ ವರೆಗೆ ಬಂದು ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂತಿರುಗುತ್ತಿದ್ದಾರೆ.


    ಗಡಿನಾಡಿನ ಜನರ ಮನವಿಗೆ ಸ್ಪಂದಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಪಾಸ್ ವ್ಯವಸ್ಥೆ ನೀಡುವುದಕ್ಕಾಗಿ ಆನ್ ಲೈನ್ ಪೋರ್ಟಲ್ ನೀಡಿದೆ. ಆದರೆ, ಉಭಯ ಜಿಲ್ಲಾಡಳಿತಗಳು ನೀಡಿರುವ ಎರಡೂ ಪೋರ್ಟಲ್ ಗಳು ಜನರ ಉಪಯೋಗಕ್ಕೆ ಲಭ್ಯವಾಗಿಲ್ಲ. ಸರ್ವರ್ ಡೌನ್ ಎಂದು ಹೇಳಿ ಎರರ್ ತೋರಿಸುತ್ತದೆ ಎಂದು ಗಡಿನಾಡಿನ ಕನ್ನಡಿಗರು ಆರೋಪಿಸಿದ್ದಾರೆ.

    ಈ ಬಗ್ಗೆ ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಶ್ರೀಕಾಂತ್ ಜೂನ್ 8ರ ಒಳಗೆ ಪಾಸ್ ವ್ಯವಸ್ಥೆ ಸರಿಯಾಗದಿದ್ದರೆ ಅಂದಿನಿಂದಲೇ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ತಲಪಾಡಿ ಗೇಟ್ ಸೋಮವಾರದಿಂದ ಹೊಸ ರೀತಿಯ ಹೋರಾಟಕ್ಕೆ ಸಾಕ್ಷಿಯಾಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply