Connect with us

    KARNATAKA

    ಕಾಸರಗೋಡು: 10 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ-ಮೂವರ ಬಂಧನ

    ಕಾಸರಗೋಡು, ಆಗಸ್ಟ್ 29: ಸುಮಾರು ಹತ್ತು ಕೋಟಿ ಮೌಲ್ಯದ ತಿಮಿಂಗಿಲದ ವಾಂತಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಕಾಸರಗೋಡುವಿನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಞಂಗಾಡ್ ಕೊವ್ವಲ್ ಪಳ್ಳಿಯ ನಿಶಾಂತ್ ಕೆ.ವಿ (41), ಕಾಞಂಗಾಡ್ ಮುರಿಯನಾವಿಯ ಸಿದ್ದೀಕ್ ಮಾಡಂಬಿಲ್ಲತ್ (31) , ಕೊಟ್ಟೋಡಿಯ ದಿವಾಕರ (38) ಬಂಧಿತ ಆರೋಪಿಗಳು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾಞಂಗಾಡ್ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಾಞಂಗಾಡ್ ಗ್ರೀನ್ ಲ್ಯಾಂಡ್ ಟೂರಿಸ್ಟ್ ಹೋಂ ನಿಂದ ತಿಮಿಂಗಿಲ ವಾಂತಿ ಸಹಿತ ಮೂವರನ್ನು ವಶಪಡಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply