KARNATAKA
ಯಾವುದೇ ಮಧ್ಯಂತರ ಆದೇಶವಿಲ್ಲ…ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಹಿಜಬ್ ಅರ್ಜಿ ವರ್ಗಾವಣೆ
ಬೆಂಗಳೂರು ಫೆಬ್ರವರಿ 9: ತರಗತಿಗಳಲ್ಲಿ ಹಿಜಬ್ ಅವಕಾಶಕ್ಕೆ ಹೈಕೋರ್ಟ್ ನಲ್ಲಿರುವ ಪ್ರಕರಣದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಉಡುಪಿ ವಿದ್ಯಾರ್ಥಿಗಳು ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಪೀಠದಲ್ಲಿ ನಡೆಯಿತು.
ಎರಡನೇ ದಿನ ವಿಚಾರಣೆ ಆರಂಭದಲ್ಲೇ ಇದು ಬಹಳ ದೊಡ್ಡ ವಿಚಾರ. ಮೂರು ನ್ಯಾಯಾಲಯದ ಆದೇಶ ನೋಡಿದ್ದೇವೆ. ಕೆಲವೊಂದು ಪಿಐಎಲ್ ಗಳು ದಾಖಲು ಆಗುತ್ತಿವೆ. ಆ ಅರ್ಜಿಗಳು ಕೂಡ ವಿಭಾಗೀಯ ಪೀಠಕ್ಕೆ ವಿಚಾರಣೆಗೆ ಬರುತ್ತಿವೆ ಎಂದು ನ್ಯಾ. ಕೃಷ್ಣ ದೀಕ್ಷಿತ್ ಹೇಳಿದರು. ಕೊನೆಗೆ ಈ ಪ್ರಕರಣದ ವಿಚಾರಣೆ ದೀರ್ಘವಾಗಿರುವ ಕಾರಣ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. ಮುಖ್ಯ ನಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು
You must be logged in to post a comment Login