LATEST NEWS
ಕಾರ್ಕಳ – ಸಿಡಿಲು ಬಡಿದು ಯುವಕ ಸಾವು
ಉಡುಪಿ ಎಪ್ರಿಲ್ 26: ಸಿಡಿಲು ಬಡಿದು ಯುವಕನೋರ್ವ ಸಾವನಪ್ಪಿರುವ ಘಟನೆ ಕಾರ್ಕಳ ತಾಲ್ಲೂಕಿನ ಹೊಸ್ಮಾರು ಜಾಣಮನೆಯ ಬಳಿ ನಡೆದಿದೆ.
ಮೃತರನ್ನು ಜಿಗೀಶ್ ಜೈನ್ (38) ಎಂದು ಗುರುತಿಸಲಾಗಿದೆ. ಮನೆಯ ಆವರಣದಲ್ಲಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾರೆ. ಜಿಗೀಶ್ ಸೋಮವಾರ ಸಂಜೆ 3.45 ವೇಳೆ ಮಳೆ ಆರಂಭಗೊಂಡಾಗ ಮನೆಯಗೆ ನೀರು ಬರದಂತೆ ಕಬ್ಬಿಣದ ಶೀಟ್ ಅನ್ನು ಸರಪಡಿಸುತ್ತಿದಾಗ ಸಿಡಿಲಪ ಬಡಿದಿತ್ತು. ಈ ಸಂದರ್ಭ ಅವರ ಕೈ ಕರಟಿ ಹೋಗಿತ್ತು.
You must be logged in to post a comment Login