LATEST NEWS
ಕಾರ್ಕಳ – ಅಕ್ರಮ ಗೋ ಸಾಗಾಟದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂಜಾವೇ ಕಾರ್ಯಕರ್ತರಿಂದ ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ
ಉಡುಪಿ ಸೆಪ್ಟೆಂಬರ್ 22: ಕಾರ್ಕಳದ ಶಿರ್ಲಾಲು ಎಂಬಲ್ಲಿ ನಡೆದ ಅಕ್ರಮ ಗೋ ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಜೆಕಾರ್ ಠಾಣೆ ಮುಂಭಾಗ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ಠಾಣೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಘಟನೆ ನಡೆದು ಎರಡು ದಿನ ಕಳೆದರೂ ದನಗಳ್ಳರನ್ನು ಬಂಧಿಸದ ನಿರ್ಲಕ್ಷ್ಯ ದೋರಣೆ ತೋರುತ್ತಿರುವ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 21 ರಂದು ಸಂಜೆ ಸುಮಾರು 7 ಗಂಟೆಗೆ ಶಿರ್ಲಾಲಿನಿಂದ ಮಾರುತಿ 800 ಕಾರನ್ನು ಸಂಘಟನೆಯ ಕಾರ್ಯಕರ್ತರು ಬೆನ್ನಟ್ಟಿದ್ದು, ಕಾರು ಕೆರ್ವಾಶೆಯ ಕಡೆಗೆ ಹೋಗುತ್ತಿತ್ತು .
ಈ ವೇಳೆಗೋ ಸಾಗಾಟ ಮಾಡುತ್ತಿದ್ದ ಗೋ ಕಳ್ಳರ ವಾಹನ ಅಡ್ಡಗಟ್ಟಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಎರಡು ಗೋವುಗಳ ರಕ್ಷಣೆ ಮಾಡಿದ್ದರು. ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಈ ಘಟನೆ ನಡೆದಿತ್ತು…
You must be logged in to post a comment Login