Connect with us

    LATEST NEWS

    ಕಾಪುವಿನಲ್ಲಿ ನಾಗರ ಪಂಚಮಿ ಪ್ರಯುಕ್ತ ಜೀವಂತ ನಾಗನಿಗೆ ಜಲಾಭಿಷೇಕ

    ಕಾಪು ಅಗಸ್ಟ್ 2: ಕಾಪುವಿನಲ್ಲಿ ನಾಗರ ಪಂಚಮಿ ಪ್ರಯುಕ್ತ ಜೀವಂತ ನಾಗನಿಗೆ ಜಲಾಭಿಷೇಕ ಅರ್ಪಿಸಿದ ಘಟನೆ ನಡೆದಿದೆ.

    ಕಾಪು ಬಳಿಯ ಮಜೂರು ನಿವಾಸಿ ಗೋವರ್ಧನ್ ಭಟ್‌ರವರು ಈ ಬಾರಿಯೂ ಮಂಗಳವಾರ ನಡೆದ ನಾಗರ ಪಂಚಮಿಯಂದು ತಮ್ಮ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿರುವ ಜೀವಂತ ನಾಗರ ಹಾವಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಿ ನಾಗರ ಪಂಚಮಿ ಹಬ್ಬ ಆಚರಿಸಿದರು. ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿರುವ ಗೋವರ್ಧನ ಭಟ್‌ರವರು ಕ್ಯಾಟರಿಂಗ್ ವೃತ್ತಿಯನ್ನೂ ಕಂಡು ಕೊಂಡಿದ್ದಾರೆ.

    ಕಳೆದ 20 ವರ್ಷಗಳಿಂದ ರಸ್ತೆಯಲ್ಲಿ ಅಪಘಾತಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರ ಹಾವುಗಳನ್ನು ತಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅದು ಸಂಪೂರ್ಣ ಗುಣ ಮುಖವಾದಾಗ ಮತ್ತೆ ಅದನ್ನು ಕಾಡಿಗೆ ಬಿಡುವುದೂ ಅವರ ನೆಚ್ಚಿನ ಕಾಯಕ. ಎಲ್ಲೇ ಗಾಯಗೊಂಡಿರುವ ಹಾವು ಬಗ್ಗೆ ಯಾರೇ ದೂರವಾಣಿ ಕರೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸುವ ಗೋರ್ವಧನ ಭಟ್ ಅವರಿಗೆ ನಾಗರ ಹಾವಿನ ಡಾಕ್ಟರ್ ಎಂದು ಹೇಳುವುದೂ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply