Connect with us

LATEST NEWS

ದೈವ ಆಶೀರ್ವಾದ ಮಾಡಿದರೆ ಏನು ಆಗುತ್ತದೆ ಅನ್ನುವುದಕ್ಕೆ ನಾನೇ ಸಾಕ್ಷಿ – ರಿಷಬ್ ಶೆಟ್ಟಿ

ಮಂಗಳೂರು ಅಕ್ಟೋಬರ್ 21: ಎಲ್ಲಿಯವರೆಗೆ ಕಾಂತಾರ ಸಿನೆಮಾ ಮುಟ್ಟಿದೆ ಅಂದರೆ ಅಮೇರಿಕಾದ ಒಂದು ಪ್ರದೇಶದಲ್ಲಿ ಪಂಜುರ್ಲಿ ದೈವದ ಮೊಗ ಇಟ್ಟಿದ್ದಾರೆ. ದೈವ ಆಶೀರ್ವಾದ ಮಾಡಿದರೆ ಏನು ಆಗುತ್ತದೆ ಅನ್ನುವುದಕ್ಕೆ ನಾನೇ ಸಾಕ್ಷಿ ಎಂದು ಖ್ಯಾತ ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.


ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಗರ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಕುಡ್ಲದ ಪಿಲಿಪರ್ಬ’ದಲ್ಲಿ ಭಾಗವಹಿಸಿ ಮಾತನಾಡಿದ ಕಾಂತಾರ ನಟ ರಿಷಬ್ ಶೆಟ್ಟಿ, ಕಾಂತಾರ ಸಿನೆಮಾ ವಿಶ್ವದಾದ್ಯಂತ ಹೊಗುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ದೈವದ ಆಶೀರ್ವಾದಿಂದ ಸಿನಮಾ ವಿಶ್ವದಾದ್ಯಂತ ಹೋಗಿದೆ. ನಮಗೆ ಯಾವುದೇ ಕೆಲಸ ಮಾಡಿದಾಗ ಸಾರ್ಥಕತೆ ನಮಗೆ ಖುಷಿ ಯಾವಾಗ ಆಗುತ್ತೆ ಅಂದರೆ, ಅಮೇರಿಕಾಕ್ಕೆ ಹೋದ ವೇಳೆ ಅಲ್ಲಿನ ಸೆನೆಟ್ ಒಬ್ಬರು ಹೇಳಿದ್ರು, ಕಾಂತಾರ ಸಿನೆಮಾದ ರೀತಿಯಲ್ಲೇ ನಮ್ಮಲ್ಲೂ ಇದೇ ರೀತಿಯ ಸಮಸ್ಯೆಗಳು ಇತ್ತು ಅಂತ, ಕಾಂತಾರ ನಮ್ಮ ಊರಿನ ಕತೆ ಅಲ್ಲ ಅದು ಪ್ರಪಂಚದಾದ್ಯಂತ ಇರುವ ಕಥೆ ಅದು, ಎಲ್ಲಿಯವರೆಗೆ ಕಾಂತಾರ ಸಿನೆಮಾ ಮುಟ್ಟಿದೆ ಅಂದರೆ ಅಮೇರಿಕಾದ ಒಂದು ಜಾಗದಲ್ಲಿ ಪಂಜುರ್ಲಿ ದೈವದ ಮೊಗ ಇಟ್ಟಿದ್ದಾರೆ. ದೈವ ಆಶೀರ್ವಾದ ಮಾಡಿದರೆ ಎನು ಆಗುತ್ತದೆ ಅನ್ನವುದಕ್ಕೆ ನಾನು ಸಾಕ್ಷಿ ಎಂದರು.

Share Information
Advertisement
Click to comment

You must be logged in to post a comment Login

Leave a Reply