Connect with us

    LATEST NEWS

    ಗಂಡನ ಮನೆ ಪ್ರವೇಶಕ್ಕೂ ನ್ಯಾಯಾಲಯದ ಮೊರೆ ಹೋದ ಕನಕದುರ್ಗ

    ಗಂಡನ ಮನೆ ಪ್ರವೇಶಕ್ಕೂ ನ್ಯಾಯಾಲಯದ ಮೊರೆ ಹೋದ ಕನಕದುರ್ಗ

    ಕೇರಳ ಜನವರಿ 25: ಸುಪ್ರೀಂಕೋರ್ಟ್ ಆದೇಶ ಎಂದು ಶಬರಿಮಲೆ ಪ್ರವೇಶಿಸಿದ ಕನಕದುರ್ಗಾ ಈಗ ತನ್ನ ಗಂಡನಮನೆ ಪ್ರವೇಶಕ್ಕೆ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಶಬರಿಮಲೆ ಪ್ರವೇಶಿಸಿದ ನಂತರ ತನ್ನ ಗಂಡನ ಮನೆಗೆ ತಿರುಗಿ ಬಂದ ಕನಕದುರ್ಗಾಗೆ ಅವರ ಕುಟುಂಬಸ್ಥರು ಪ್ರವೇಶ ನಿರಾಕರಿಸಿದ್ದರು. ಶಬರಿಮಲೆ ಭಕ್ತರ ಹಾಗೂ ಸಮಸ್ತ ಹಿಂದೂ ಗಳ ಬಹಿರಂಗ ಕ್ಷಮೆ ಕೇಳಿ ಮನೆಗೆ ಬರುವಂತೆ ತಿಳಿಸಿದ್ದರು.

    ಇದರ ಬೆನ್ನಲ್ಲೇ ತಮ್ಮ ನಿಲುವನ್ನು ದೃಢಪಡಸಿರುವ ಕನಕದುರ್ಗಾ, ಮಾತಿನ ಅಥವಾ ನಡೆಯ ಮೂಲಕ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳಲಾರೆ. ನಾನು ಮನೆಯೊಳಕ್ಕೆ ಪ್ರವೇಶಿಸುವುದನ್ನು ತಡೆಯುವ ಹಕ್ಕು ನನ್ನ ಸಹೋದರ, ಪತಿ ಸೇರಿದಂತೆ ಯಾರಿಗೂ ಇಲ್ಲ ಎಂಬುದನ್ನು ಪುನರುಚ್ಚರಿಸುತ್ತೇನೆ ಎಂದು ಹೇಳಿದ್ದು, ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದಕ್ಕೆ ಯಾರಲ್ಲೂ ಕ್ಷಮೆ ಕೇಳಲಾರೆ. ಎಲ್ಲರನ್ನೂ ನ್ಯಾಯಾಲಯದಲ್ಲೇ ಎದುರಿಸುತ್ತೇನೆ ಅಲ್ಲದೆ ನ್ಯಾಯಾಲಯದ ಆದೇಶ ಮೂಲಕ ನಾನು ಮನೆ ಪ್ರವೇಶಿಸುತ್ತೇನೆ ಎಂದು ಹೇಳಿದರು.

    ಮನೆಗೆ ಪ್ರವೇಶಿಸದಂತೆ ತಡೆಯುವಲ್ಲಿ ಪತಿ ಕೃಷ್ಣನುಣ್ಣಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ನ್ಯಾಯಾಲಯದ ಆದೇಶದೊಂದಿಗೆ ಮನೆಯೊಳಕ್ಕೆ ಪ್ರವೇಶಿಸಲಿದ್ದೇನೆ. ಅಲ್ಲಿಯವರೆಗೂ ‘ಒನ್ ಸ್ಟಾಪ್ ಸೆಂಟರ್’ನಲ್ಲಿ ಉಳಿಯಲಿದ್ದೇನೆ ಹೇಳಿದ್ದಾರೆ.

    ಮಲಪ್ಪುರಂನವರಾದ ಕನಕದುರ್ಗಾ ಜನವರಿ 2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದರು. ಕನಕದುರ್ಗಾ ಮೇಲೆ ಇತ್ತೀಚೆಗೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಪಡೆದು ಪತಿಯ ಮನೆಗೆ ತೆರಳಿದ ಅವರನ್ನು ಒಳ ಪ್ರವೇಶಿಸದಂತೆ ಮನೆಯವರೇ ತಡೆದಿದ್ದರು. ಮನೆಗೆ ಬರಲು ಅನುಮತಿ ನೀಡಬೇಕಾದರೆ ಅಯ್ಯಪ್ಪನ ಭಕ್ತರ ಕ್ಷಮೆ ಕೇಳು ಎಂದು ಕನಕದುರ್ಗಾ ಸಹೋದರ ಭರತ್ ಭೂಷಣ್ ಒತ್ತಾಯಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply