Connect with us

    DAKSHINA KANNADA

    ಕಂಬಳ ಕೆರೆಯಲ್ಲಿ ಬಿದ್ದರೂ ಗುರಿ ಮುಟ್ಟಿದ ಕಂಬಳ ಓಟಗಾರ…ವಿಡಿಯೋ ವೈರಲ್

    ಮಂಗಳೂರು ಡಿಸೆಂಬರ್ 6: ಕಂಬಳ ಕೆರೆಯಲ್ಲಿ ಕೋಣ ಓಡಿಸುವ ಸಂದರ್ಭ ಓಟಗಾರ ಆಯತಪ್ಪಿ ಕಳೆಗೆ ಬಿದ್ದರೂ ಕೂಡ ಹಗ್ಗ ಬಿಡದೆ ಮುನ್ನುಗ್ಗಿ ಗೆಲುವು ಸಾಧಿಸಿದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.


    ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ನಡೆದ ವೀರ ವಿಕ್ರಮ ಜೋಡುಕರೆ ಕಂಬಳ ರೋಮಾಂಚನಕಾರಿ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಹಗ್ಗದ ಕಿರಿಯ ವಿಭಾಗದಲ್ಲಿ, ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದರು.

    ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ್ದಾರೆ. ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಓಟಗಾರ ಆಕಾಶ್ ತಮ್ಮ ಸಾಹಸದಿಂದ ಕಂಬಳಪ್ರಿಯರ ಮನ ಗೆದ್ದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply