Connect with us

    LATEST NEWS

    ಜಗತ್ತಿಗೆ ಕೊರೊನಾ ಸಂಕಟ ಭವಿಷ್ಯ ಹೇಳಿದ್ದ ಕಂಬ್ಳಪದವಿನ ಸ್ವಾಮೀಜಿ ನಿಧನ….!!

    ಕೊರೊನಾ ಶಂಕೆ …….?

    ಮಂಗಳೂರು, ಜೂನ್ 20 : ಮಂಗಳೂರು ಹೊರವಲಯದ ಮುಡಿಪು ಬಳಿಯ ಕಂಬಳಪದವಿನ ದುರ್ಗಾಕಾಳಿ ಕ್ಷೇತ್ರದ ಸ್ವಾಮಿಯಾಗಿದ್ದ ಬಾಲಗಂಗಾಧರ ಸ್ವಾಮೀಜಿ (67) ಮುಂಬೈನಲ್ಲಿ ನಿಧನರಾಗಿದ್ದಾರೆ.

    ಮುಂಬೈನಲ್ಲಿ ಶಾಖಾ ಮಠ ಹೊಂದಿದ್ದ ಸ್ವಾಮೀಜಿ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಮುಡಿಪಿಗೆ ಬರುತ್ತಿದ್ದರು. ಈ ಬಾರಿ ಲಾಕ್ ಡೌನ್ ಕಾರಣ ಎಪ್ರಿಲ್ ನಲ್ಲಿ ನಡೆಯಲಿದ್ದ ವಾರ್ಷಿಕ ಪೂಜೆಗೆ ಬಂದಿರಲಿಲ್ಲ. ಮುಂಬೈನ ಅಂಬರನಾಥ್ ಎಂಬಲ್ಲಿ ದುರ್ಗಾಕಾಳಿ ಮಂದಿರದಲ್ಲಿ ನೆಲೆಸಿದ್ದ ಸ್ವಾಮೀಜಿ, ನಗರದಲ್ಲಿ ಕೊರೊನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹೊರಗೆ ಬರುತ್ತಿರಲಿಲ್ಲ.

    ಇತ್ತೀಚೆಗೆ ಸ್ವಾಮೀಜಿಯ ಜೊತೆಗಿದ್ದ ಮಗನಿಗೆ ಕೊರೊನಾ ಪಾಸಿಟಿವ್ ಆಗಿದೆ ಎನ್ನಲಾಗ್ತಿತ್ತು. ಇಂದು ಮಧ್ಯಾಹ್ನ ಸ್ವಾಮೀಜಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದ್ದರೂ, ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ವಿಶೇಷ ಅಂದರೆ, ಕಳೆದ ವರ್ಷ ವಾರ್ಷಿಕ ಪೂಜೆಗೆ ಮುಡಿಪುವಿನ ಕಂಬಳಪದವು ಮಠಕ್ಕೆ ಆಗಮಿಸಿದ್ದ ಸ್ವಾಮೀಜಿ ಮುಂದಿನ ದಿನಗಳಲ್ಲಿ ಜಗತ್ತಿಗೆ ಸಾಂಕ್ರಾಮಿಕ ರೋಗದ ಆಪತ್ತು ಬರಲಿದೆ ಎಂದು ಭವಿಷ್ಯ ಹೇಳಿದ್ದರು. ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಸ್ವಾಮೀಜಿಗೆ ಕಾಳಿಯ ದರ್ಶನ ಬರುವುದೆಂಬ ನೆಲೆಯಲ್ಲಿ ಭಾರೀ ಜನ ಸೇರುತ್ತಿದ್ದರು. ಮುಡಿಪು ಮತ್ತು ಮುಂಬೈನಲ್ಲಿ ಹಲವಾರು ಭಕ್ತರನ್ನು ಸ್ವಾಮೀಜಿ ಹೊಂದಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply