Connect with us

    LATEST NEWS

    ” ಉಳ್ಳಾಲ ಪೇಟೆ ಪಾಕಿಸ್ತಾನ ಅಲ್ವಾ” ಕಲ್ಲಡ್ಕ್ ಪ್ರಭಾಕರ್ ಭಟ್ ರ ವಿವಾದಾತ್ಮಕ ಹೇಳಿಕೆ ಈಗ ಫುಲ್ ಟ್ರೋಲ್

    ಮಂಗಳೂರು ನವೆಂಬರ್ 03 :ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ಹೇಳಿಕೆ ನೀಡಿದ್ದ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಭಟ್‌ ಅವರ ವಿಡಿಯೋ ವೈರಲ್‌ ಆದ ಕೂಡಲೇ, ಕೆಲವು ನೆಟ್ಟಿಗರು ಪ್ರಭಾಕರ್‌ ಭಟ್‌ ಅವರನ್ನು ಟ್ರೋಲ್‌ ಮಾಡಲು ಆರಂಭಿಸಿದ್ದಾರೆ.


    ನವೆಂಬರ್ 1 ರ ಭಾನುವಾರ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಭಾಕರ್‌ ಭಟ್‌ ಅವರು, “ಮುಸ್ಲಿಂ ಪ್ರಾಬಲ್ಯದ ಉಳ್ಳಾಲ ಕ್ಷೇತ್ರವು ಪಾಕಿಸ್ತಾನವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಹೇಗೆ ಅಸ್ತಿತ್ವಕ್ಕೆ ಬಂತು? ಅದಕ್ಕೆ ಕಾರಣ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದ್ದು. ಹಾಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದವು. ಈಗ ನೀವು ಉಳ್ಳಾಲಕ್ಕೆ ಹೋದರೆ ಅದು ಪಾಕಿಸ್ತಾನದಂತೆ ಆಗಿದೆ. ಅದು ಬೇರೆ ಆಗಲು ಸಾಧ್ಯವೇ?” ಎಂದು ಹೇಳಿದ್ದರು.


    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಆಕ್ರೋಶ ವ್ಯಕ್ತವಾಗಿದ್ದು, ಅದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಈಗ ಟ್ರೋಲ್‌ ಗೆ ಆಹಾರವಾಗಿದೆ.  ವಿಧ ವಿಧದ ಟ್ರೋಲ್ ಗಳು ಪ್ರಾರಂಭವಾಗಿದೆ. ಅದರಲ್ಲಿ “ಉಳ್ಳಾಲಕ್ಕೆ ಹೋಗಲು ಇನ್ನು ಮುಂದೆ ಬಸ್ ಟಿಕೆಟ್ ಇದ್ದರೆ ಸಾಲದು ಪಾಸ್‌ಪೋರ್ಟ್‌ ಕೂಡ ಬೇಕು”


    ಮತ್ತೋರ್ವ ಬಳಕೆದಾರರು, ಉಳ್ಳಾಲಕ್ಕೆ ಸಂಚರಿಸುವ ಖಾಸಗಿ ಬಸ್‌ನ ಮೇಲೆ ‘ಸ್ಟೇಟ್‌ ಬ್ಯಾಂಕ್‌ ಟು ಪಾಕಿಸ್ತಾನ’ ಎಂದು ಬರೆದಿರುವಂತೆ ಚಿತ್ರವೊಂದನ್ನು ಹಂಚಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply