Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ವಂಚನೆ- ಪೊಲೀಸರಿಗೆ ದೂರು

    ಪುತ್ತೂರು ನವೆಂಬರ್ 27: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಪುತ್ತೂರು ನಗರಠಾಣೆಯಲ್ಲಿ ದಾಖಲಾಗಿದೆ. ಮಂಗಳೂರು ಮೂಲದ ಯುವತಿಯರಿಬ್ಬರು ತಮ್ಮ ಗೆಳತಿಯನ್ನು ನಂಬಿ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದು,ಈಗ ಕೆಲಸವೂ ಇಲ್ಲ ಹಣವೂ ಇಲ್ಲದೆ ಕಂಗಾಲಾಗಿದ್ದಾರೆ. ತಮ್ಮ ಗೆಳತಿ ನವ್ಯಾ ಮತ್ತು ಆಕೆಯ ಅಣ್ಣ ಎಂದು ಪರಿಚಯಿಸಿಕೊಂಡ ಯತೀಶ್ ಮರೀಲ್ ಕೆಲಸ ಕೊಡಿಸುವ ಆಮಿಷ ಒಡ್ಡಿ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.


    ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿರುವ ನವ್ಯಾ ಹಾಗೂ ಆಕೆಯ ಅಣ್ಣ ಯತೀಶ್ ಮರೀಲ್ ಒಟ್ಟು 10 ಮಂದಿಯಿಂದ ತಲಾ 8 ಸಾವಿರ ರೂಪಾಯಿ ಹಣ ಪಡೆದಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ನಗದಾಗಿ ಹಣ ನೀಡಿದ್ದು, ಉಳಿದವರು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿರುತ್ತಾರೆ. ಇದೀಗ ಕೆಲಸ ಬಗ್ಗೆ ವಿಚಾರಿಸಿದಾಗ ಮತ್ತೆ ಹಣ ನೀಡುವಂತೆ ಯತೀಶ್ ಮರೀಲ್ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.


    ಸಂತ್ರಸ್ಥ ಯುವತಿಯರು ಹಣ ಕೊಡಲು ನಿರಾಕರಿಸಿದಾಗ ಅವ್ಯಾಚ್ಛವಾಗಿ ಬೈದು ಆರೋಪಿ ಪೋನ್ ಸ್ವಿಚ್ ಆಪ್ ಮಾಡಿರುತ್ತಾರೆ. ಗೆಳತಿ ನವ್ಯಾ ಕೂಡಾ ಉಢಾಪೆಯಿಂದ ಮಾತನಾಡಿದ್ದು, ಈ ಹಣ ನೀಡಿದ್ದಕ್ಕೆ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸಿದ್ದಾಳೆ. ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೊಂದು ದೊಡ್ಡ ಮಟ್ಟದ ವಂಚನಾ ಜಾಲ ಎಂಬ ಮಾಹಿತಿ ಲಭ್ಯವಾಗಿದ್ದು, ಇದೇ ರೀತಿ ವಿವಿಧ ಕಡೆಗಳಲ್ಲಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.  ಕೆಲಸದ ಆಸೆಯಿಂದ ನಾವು ಇವರಿಗೆ ಹಣ ನೀಡಿದ್ದು, ಇದೀಗ ವಂಚನೆಗೆ ಒಳಗಾಗಿದ್ದೇವೆ. ಈ ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

    ತನ್ನ ಗೆಳತಿ ಕೆಲಸ ಕೊಡಿಸಿ ತಮ್ಮ ಪಾಲಿಗೆ ಕಾಮಧೇನು ಆಗುತ್ತಾಳೆ ಎಂದು ನಂಬಿಕೊಂಡ ಮಂಗಳೂರು ಮೂಲದ ಯುವತಿ ಇದೀಗ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಾನಲ್ಲದೆ ತನ್ನ ಗೆಳತಿ ಹಾಗೂ ಆಕೆಯ ಸಂಬಂಧಿಕರು ಮತ್ತು ಗೆಳತಿಯರನ್ನು ಸೇರಿಸಿಕೊಂಡು ಒಟ್ಟು 1೦ ಮಂದಿಯಿಂದ ಹಣ ಕೊಡಿಸಿದ ತಪ್ಪಿಗೆ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕೊರೊನಾ ಹಿನ್ನಲೆಯಿಂದ ಬದುಕು ಸಂಕಷ್ಟದಲ್ಲಿದ್ದ ನಮಗೆ ಕೆಲಸ ಅನಿವಾರ್ಯವಾಗಿತ್ತು. ಹಾಗಾಗಿ ಗೆಳತಿ ಎಂಬ ನಂಬಿಕೆಯಿಂದ ನವ್ಯಾಳನ್ನು ನಂಬಿ ಇದೀಗ ಹಣ ಕಳೆದುಕೊಂಡಿದ್ದೇವೆ ಎನ್ನುತ್ತಾ ಕಣ್ಣೀರು ಸುರಿಸುತ್ತಾ ನೋವು ಹೇಳಿಕೊಂಡರು ಈ ಮಂಗಳೂರಿನ ಯುವತಿ.

    Share Information
    Advertisement
    Click to comment

    You must be logged in to post a comment Login

    Leave a Reply