Connect with us

    DAKSHINA KANNADA

    ಡಿ ಕೆ ಶಿ ಮನೆ ಮೇಲೆ ಐ.ಟಿ. ದಾಳಿ: ಪೂಜಾರಿ ಖಂಡನೆ

    ಮಂಗಳೂರು,ಆಗಸ್ಟ್ 02 : ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಐ.ಟಿ. ನಡೆಸಿರುವ ದಾಳಿಯನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಖಂಡಿಸಿದ್ದಾರೆ. ಈ ದಾಳಿ ಕೇಂದ್ರ ಸರಕಾರದ ಹೀನ ಕೃತ್ಯ ಎಂದು ಕಿಡಿಕಾರಿದ್ದಾರೆ.
    ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಯಾವ ಪಕ್ಷ ಸೊತ್ತಲ್ಲ, ಯಾವ ವ್ಯಕ್ತಿಗೂ ಸೇರಿದ ಇಲಾಖೆ ಅಲ್ಲ.ಆದರೆ ಕೇಂದ್ರ ಸರ್ಕಾರ ಅದನ್ನು ತಮ್ಮಿಷ್ಟದಂತೆ ಬಳಸುತ್ತಿರುವುದು ಸರಿಯಲ್ಲ ಎಂದು ಅವರು ಮೋದಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರಿ ಮಾಡಿಕೊಂಡು 39 ಕಡೆ ದಾಳಿ ನಡೆಸಲಾಗಿದೆ. ಈ ದಾಳಿಗೆ ಸೇನೆಯ ಭಾಗ ವಾಗಿರುವ ಸಿಆರ್ ಪಿಎಫ್ ಪಡೆಯನ್ನು ಬಳಸಿಕೊಡಿರುವುದು ಸರಿಯಲ್ಲ. ಡಿಕೆಶಿ ಅವರೇನು ಉಗ್ರಗಾಮಿಯೇ. ಎಂದು ಅವರು ಪ್ರಶ್ನಿಸಿದ ಪೂಜಾರಿ ಪ್ರಧಾನಿ ಮೋದಿ ಅವರನ್ನು ಯಾರು ಪ್ರಶ್ನಿಸುವಂತಿಲ್ಲವೆ? ಐಟಿ ದಾಳಿಗೆ ಮುನ್ನ ಕೆಲವೊಂದು ಕಾನೂನು ಪ್ರಕ್ರಿಯೆ ನಡೆಸಬೇಕಿತ್ತು, ಆದರೆ ಅದ್ಯಾವುದನ್ನು ಇಲ್ಲಿ ಮಾಡಲಾಗಿಲ್ಲ ಎಂದು ದೂರಿದರು. ಇಂದು ಶಿವಕುಮಾರ್ , ನಾಳೆ ಪೂಜಾರಿ , ನಾಡಿದ್ದು ಸೋನಿಯಾ ಗಾಂಧಿ, ಆ ಬಳಿಕ ರಾಹುಲ್ ಗಾಂಧಿಯ ವಿರುದ್ದವೂ ಐಟಿ ದಾಳಿ ಮಾಡವ ಇರಾದೆ ಮೋದಿ ಅವರಿಗಿದೆ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಮೋದಿ ಹೊರಟಂತಿದೆ ಎಂದ ಅವರು ದೇಶದ ಜನತೆ ಇದಕ್ಕೆ ಸರಿಯಾದ ಉತ್ತರವನ್ನು ನೀಡಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply