Connect with us

    LATEST NEWS

    ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ – ಕ್ರೈಸ್ತರು ರಸ್ತೆಗಳಿದರೆ ಸರಕಾರವೇ ನೇರ ಹೋಣೆ – ಐವನ್ ಡಿಸೋಜಾ

    ಮಂಗಳೂರು ನವೆಂಬರ್ 18: ರಾಜ್ಯ ಸರಕಾರದ ಜಾತಿ ನಿಗಮ ಸ್ಥಾಪನೆ ಈಗ ಬೆಂಕಿಕಿಡಿ ಹೊತ್ತಿಸಿದ್ದು, ಈಗಾಗಲೇ ಮರಾಠ ನಿಗಮದ ಸ್ಥಾಪನೆ ಬೆನ್ನಲೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಈ ನಡುವೆ ಮರಾಠ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಮಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.


    ಮಂಗಳೂರಿನಲ್ಲಿ ಮಾತನಾಡಿದ ಅವರು ಕ್ರೈಸ್ತರಲ್ಲಿಯೂ ಸಾಕಷ್ಟು ಬಡ ಜನರಿದ್ದಾರೆ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಿಂದಿನಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದರೂ ಕೂಡ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋರಿಸಿದರು.
    ಇನ್ನು ಕ್ರೈಸ್ತ ಅಭಿವೃದ್ದಿ ನಿಗಮ ಸ್ಥಾಪಿಸದಿದ್ದರೆ ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು, ಜನರು ಬೀದಿಗೆ ಬಂದರೆ ಸರಕಾರವೇ ನೇರ ಹೊಣೆ. ಹೀಗಾಗಿ ಕ್ರೈಸ್ತರನ್ನ ಯಾವತ್ತೂ ಲಘುವಾಗಿ ಪರಿಗಣಿಸಬೇಡಿ. ಕ್ರೈಸ್ತ ಸಮುದಾಯದ ಮೌನ, ಅವರ ವೀಕ್ನೆಸ್ ಅಲ್ಲ ಎಂದು ಗುಡುಗಿದ್ದಾರೆ.

    ಅಂದು ಬಿಷಪ್ ಸನ್ಮಾನ ಸ್ವೀಕರಿಸಿದ ಸಿಎಂ ಇದಕ್ಕೆ ಅನುಮೋದನೆ ನೀಡುವುದಾಗಿ ಹೇಳಿದ್ರು. ಆದರೆ ಆನಂತರ ಯಾಕಾಗಿ ರದ್ದು ಮಾಡಿದ್ದೀರಿ? ತಕ್ಷಣವೇ ಸಿಎಂ ಇದಕ್ಕೆ ಉತ್ತರ ಕೊಡಬೇಕು. ಜೊತೆಗೆ 55 ಕೋಟಿ ನಿಗಮಕ್ಕಾಗಿ ಇಟ್ಟಿದ್ದು ಏನು ಮಾಡಿದ್ದೀರಿ? 2008 ರಲ್ಲಿ ಚರ್ಚ್ ದಾಳಿಯಾದಾಗಲೂ ತಾಳ್ಮೆ ವಹಿಸಿದ್ದೀವಿ.

    ಅಲ್ಲದೆ ಸರಕಾರ ಕ್ರೈಸ್ತರಿಗಾಗಿ ಚಿಕ್ಕಾಸು ಖರ್ಚು ಮಾಡಿಲ್ಲ. ನಿಗಮ ಕೊಟ್ಟಿದ್ದೇವೆ ಅಂತಾ‌ ಜಾಹೀರಾತು ನೀಡಿದ್ರು. ಆದರೆ ಅದು ಏನು ಪ್ರಯೋಜನವಾಗಲಿಲ್ಲ. ಕ್ರೈಸ್ತರನ್ನ ಸಿಎಂ ಮಂಗಗಳು ಎಂದು ಭಾವಿಸಿಕೊಂಡಿದ್ದೀರೋ? ಎಂದು ಐವನ್ ಡಿಸೋಜಾ ಸರ್ಕಾರವನ್ನು ಟೀಕಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply