Connect with us

    LATEST NEWS

    ತೆರಿಗೆ ವಂಚನೆ ಪ್ರಕರಣ Jesus Calls ಮಿಷನರಿ ಮೇಲೆ ಐಟಿ ದಾಳಿ

    ಚೆನ್ನೈ : ಕ್ರೈಸ್ತ ಸುವಾರ್ತಾಬೋಧಕ, ಜೀಸಸ್ ಕಾಲ್ಸ್ ಮಿಷನರಿಯ ಡಾ. ಪಾಲ್ ದಿನಕರನ್ ಅವರ ಮನೆ, ಕಚೇರಿ ಮೇಲೆ ಇಂದು ನಸುಕಿನ ಜಾವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


    ಜೀಸಸ್ ಕಾಲ್ಸ್ ಮಿಷನರಿಯ ಪ್ರಧಾನ ಕಚೇರಿಯಾದ ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ತಮಿಳುನಾಡಿನ 28 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಸಂಘಟಿಸಲಾಗಿದೆ. ದಿನಕರನ್ ಕುಟುಂಬದ ಒಡೆತನದ ಕರುಣಾ ಕ್ರಿಶ್ಚಿಯನ್ ಶಾಲೆ ಮತ್ತು ಕಾರುಣ್ಯ ವಿಶ್ವವಿದ್ಯಾಲಯದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಆದಾಯ ತೆರಿಗೆ ವಂಚನೆ ಕುರಿತಂತೆ ಆರೋಪಗಳು ಕೇಳಿ ಬಂದಿತ್ತು. ಈ ಕುರಿತಂತೆ ದೂರು ದಾಖಲಾಗಿತ್ತು. ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ದೇಣಿಗೆ ಪಡೆದು ತೆರಿಗೆ ಕಟ್ಟದೆ ವಂಚಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಇಲಾಖೆ ದಾಳಿ ನಡೆಸಿದೆ.
    ಜೀಸಸ್ ಕಾಲ್ಸ್ ಮಿಷನರಿ ದೇಶಾದ್ಯಂತ ಕೆಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಜೀಸಸ್ ಕಾಲ್ಸ್ ಮಿಷನರಿ ಅಥವಾ ದಿನಕರನ್ ಕುಟುಂಬ ನಡೆಸುತ್ತಿರುವ ಕಾಲೇಜುಗಳ ವಿರುದ್ಧ ಈವರೆಗೆ ಒಂದೇ ಒಂದು ದೂರು ದಾಖಲಾಗಿಲ್ಲ ಇದು ರಾಜಕೀಯ ಪ್ರೇರಿತ ದಾಳಿ, ಕೇಂದ್ರ ಸರ್ಕಾರದ ಧಾರ್ಮಿಕ ರಾಜಕೀಯಕ್ಕೆ ರಾಜ್ಯ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂದು ಹಲವಾರು ಮಂದಿ ಕಿಡಿಕಾರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply