LATEST NEWS
ಹೊಸ ಆಟೋದಲ್ಲಿ ಶ್ರೀಗಂಧ ಮರದ ತುಂಡು ಬಚ್ಚಿಟ್ಟ ಆರೋಪಿ ಅಂದರ್
ಉಡುಪಿ ಡಿಸೆಂಬರ್ 2: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಶ್ರೀಗಂಧ ಕಳ್ಳ ಸಾಗಾಣೆ ಮಾಡುತ್ತಿದ್ದ ಚೋರನೋರ್ವನನ್ನು ಬಂಧಿಸಲಾಗಿದೆ. ಆತನಿಂದ 3.8 ಕೆ.ಜಿ. ತೂಕದಷ್ಟು ಗಂಧದ ಕೊರಡುಗಳನ್ನು ವಶಪಡಿಸಲಾಗಿದೆ.
ಬಂಧಿತ ಆರೋಪಿಯನ್ನು ವಂಡ್ಸೆ ಗ್ರಾಮದ ಹಕ್ಲುಮನೆ ನಿವಾಸಿ ರಾಜೇಶ್ (34) ಎಂದು ಗುರುತಿಸಲಾಗಿದ್ದು, ಇತ ತನ್ನ ನೋಂದಣಿ ಆಗದ ಹೊಸ ಆಟೋ ರಿಕ್ಷಾದಲ್ಲಿ ಶ್ರೀಗಂಧ ಮರದ ಕೊರಡುಗಳನ್ನು ದಾಸ್ತಾನು ಮಾಡಿಟ್ಟಿದ್ದ.
ಕುಂದಾಪುರ ಅರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯಂತೆ ವಂಡ್ಸೆಗೆ ತೆರಳಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಶ್ರೀಗಂಧದ ಕೊರಡು ಸಮೇತ ಆಟೋ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅರಣ್ಯ ತಕ್ಷೀರು ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
You must be logged in to post a comment Login