Connect with us

    LATEST NEWS

    ಕುಂದಾಪುರ – ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ – 23 ದನಗಳ ರಕ್ಷಣೆ

    ಉಡುಪಿ ಜೂನ್ 27: ಅಕ್ರಮವಾಗಿ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ರಕ್ಷಣೆ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ಗುಳ್ವಾಡಿ ಎಂಬಲ್ಲಿ ನಡೆದಿದೆ.


    ಕುಂದಾಪುರ ಪರಿಸರದಲ್ಲಿ ಇತ್ತೀಚೆಗೆ ದನ ಕಳ್ಳತನ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರು ಕುಂದಾಪುರ ತಾಲೂಕಿನ ಗುಳ್ವಾಡಿ ಗ್ರಾಮದಲ್ಲಿರುವ ಅಬುಬಕ್ಕರ್ ಎಂಬವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳ ರಕ್ಷಣೆ ಮಾಡಿದ್ದಾರೆ. ಆರೋಪಿ ಅಬೂಬಕ್ಕರ್ ಮನೆಯಲ್ಲಿ ದನಗಳನ್ನ ಕಟ್ಟಿ ಹಾಕಿ ಮಾಂಸಕ್ಕಾಗಿ‌ ಬಳಕೆ ಮಾಡುತ್ತಿದ್ದು, ದಾಳಿ ಸಂದರ್ಭದಲ್ಲಿ ಅಬೂಬಕ್ಕರ್ ಮನೆಯಲ್ಲಿ 10ಮಂದಿ‌ ಮಹಿಳೆಯರು ಕಂಡು ಬಂದಿದ್ದು, ಮನೆಯಲ್ಲೇ ಕಸಾಯಿಖಾನೆ ನಡೆಸುತ್ತಿದ್ದ.


    ದಾಳಿ ವೇಳೆ ಸ್ಥಳೀಯ ನೂರಾರು ಮುಸ್ಲೀಂ ಯುವಕರಿಂದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು, ದನಗಳನ್ನ ರಕ್ಷಿಸಿ ಪೊಲೀಸರು ಹಾಗೂ ಸಂಘಟನೆ ಕಾರ್ಯಕರ್ತರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply