LATEST NEWS
ಯೋಗಿ ಆದಿತ್ಯನಾಥನ ಮುಖಕ್ಕೆ ಮಸಿ ಬಳಿದು ಕಳುಹಿಸುವೆ-ಮಿಥುನ್ ರೈ ಎಚ್ಚರಿಕೆ
ಯೋಗಿ ಆದಿತ್ಯನಾಥನ ಮುಖಕ್ಕೆ ಮಸಿ ಬಳಿದು ಕಳುಹಿಸುವೆ–ಮಿಥುನ್ ರೈ ಎಚ್ಚರಿಕೆ.
ಮಂಗಳೂರು, ಅಕ್ಟೋಬರ್ 9:ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಕ್ಷಿಣಕನ್ನಡ ಕ್ಕೆ ಕಾಲಿಟ್ಟರೆ ,ಆತನ ಮುಖಕ್ಕೆ ಮಸಿ ಬಳಿದು ವಾಪಾಸು ಕಳುಹಿಸಲಾಗುವುದು ಎಂದು ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಸಿದ್ದಾರೆ.
ಮಂಗಳೂರು ಹೊರವಲಯದ ತೊಕ್ಕೋಟಿನಲ್ಲಿ ನಡೆದ ಕೇಂದ್ರ ಸರಕಾರದ ವಿರುದ್ಧದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಂತಹ ಪರಿಸ್ಥಿತಿಯಿದೆ.
ಇದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನೇ ನೇರ ಕಾರಣವಾಗಿದ್ದು, ಆತ ಕರ್ನಾಟಕ ಅಥವಾ ದಕ್ಷಿಣಕನ್ನಡ ಜಿಲ್ಲೆಗೆ ಕಾಲಿಟ್ಟಲ್ಲಿ ಆತನ ಮುಖಕ್ಕೆ ಮಸಿ ಬಳಿದು ಆತನನ್ನು ವಾಪಾಸು ಕಳಿಸುವ ಕೆಲಸವನ್ನು ಯೂತ್ ಕಾಂಗ್ರೇಸ್ ಮಾಡಲಿದೆ ಎಂದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಿಥುನ್ ರೈ ಬಿಜೆಪಿ ವಿರುದ್ಧದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಯೂತ್ ಕಾಂಗ್ರೇಸ್ ಅಧ್ಯಕ್ಷನ ಈ ಹೇಳಿಕೆ ಇದೀಗ ಭಾರೀ ವಿವಾದಕ್ಕೂ ಕಾರಣವಾಗಿದೆ. ಒರ್ವ ಮುಖ್ಯಮಂತ್ರಿ ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯ ಕದ್ರಿ ಪ್ರದೇಶದಲ್ಲಿ ಇರುವ ಜೋಗಿ ಮಠದ ಮುಖ್ಯ ಗುರುವೂ ಆಗಿರುವ ಯೋಗಿ ಆದಿತ್ಯನಾಥ್ ವಿರುದ್ಧ ಈ ರೀತಿಯ ಹೇಳಿಕೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
You must be logged in to post a comment Login