Connect with us

    LATEST NEWS

    ಶಿಕ್ಷಣ,ವೈದ್ಯಕೀಯ ವ್ಯವಸ್ಥೆ ಫ್ರೀ ಸಿಕ್ಕಿದ್ರೆ ಯಾರೂ ಭೃಷ್ಟಾಚಾರಿಗಳಾಗಲ್ಲ : ರಿಯಲ್ ಸ್ಟಾರ್ ಉಪೇಂದ್ರ 

    ಶಿಕ್ಷಣ,ವೈದ್ಯಕೀಯ ವ್ಯವಸ್ಥೆ ಫ್ರೀ ಸಿಕ್ಕಿದ್ರೆ ಯಾರೂ ಭೃಷ್ಟಾಚಾರಿಗಳಾಗಲ್ಲ : ರಿಯಲ್ ಸ್ಟಾರ್ ಉಪೇಂದ್ರ 

    ಮಂಗಳೂರು, ಡಿಸೆಂಬರ್ 05 : ನನಗೆ ರಾಜ್ಯದಲ್ಲಿ ಜನರ ನಡುವೆ ಕೆಲಸ ಮಾಡುವ 224 ಜನ ಸಿಎಂಗಳು ಬೇಕಿದ್ದಾರೆ ಹೀಗೆ ಅಂದವರು ರಿಯಲ್ ಸ್ಟಾರ್ ಉಪೇಂದ್ರ.

    ತಮ್ಮ ನೂತನ ರಾಜಕೀಯ ಪಕ್ಷವಾದ ಕೆಪಿಜೆಪಿ ಯ ಸಂಸ್ಥಾಪಕರಾದ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ.

    ತಮ್ಮ ಪಕ್ಷದ ಬಗ್ಗೆ ಮಾಹಿತಿ ನೀಡಲು ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮನ ಬಿಚ್ಚಿ ಮಾತನಾಡಿದರು ಉಪ್ಪಿ.

    ತಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಂತೆ ಜನರ ಸಮಸ್ಯೆಗಳನ್ನು ಪರಿಹರಿಸುವಂತಹ ಜನಪ್ರತಿನಿಧಿ ಆಗಬೇಕು ಎಂದು ಅವರು ಹೇಳಿದರು.

    ಪ್ರಸ್ತುತ  ರಾಜಕೀಯ ವ್ಯವಸ್ಥೆಯ ವ್ಯತಿರಿಕ್ತವಾಗಿದೆ ಈ ಹಿನ್ನೆಲೆಯಲ್ಲಿ ಕೆಪಿಜೆಪಿ ಪಕ್ಷವನ್ನು ಸ್ಥಾಪಿಸಿರುವುದಾಗಿ ಅವರು ಹೇಳಿದರು.

    ಒಬ್ಬ ಕಾರ್ಮಿಕನಾಗಿ ಜನರ ಮುಂದೆ ಹೋಗುತ್ತಿದ್ದೆನೆ.

    ಅವರೊಂದಿಗೆ ನನ್ನ ಯೋಚನೆಗಳನ್ನು, ಕಾರ್ಯ ಯೋಜನೆಗಳನ್ನು ಮುಂದಿಟ್ಟು ವಿಚಾರವಿನಿಮಯಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

    ಸಮಾಜದಲ್ಲಿನ ಪ್ರಜ್ಞಾವಂತರು ಪಕ್ಷಕ್ಕೆ ಬನ್ನಿ ಎಂದು ಅವರು ಕರೆ ನೀಡಿದರು.

    ಎಲ್ಲಿ ಸತ್ಯ ಇರುತ್ತೋ ಅಲ್ಲಿ ಧರ್ಮ ಇರುತ್ತದೆ.

    ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ ಎಂದು ಅವರು ಹೇಳಿದರು.

    ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ಈಗ ನಮ್ಮಲ್ಲಿ ಇಲ್ಲದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ರಮುಖವಾಗಿ ಶಿಕ್ಷಣ ,

    ವೈದ್ಯಕೀಯ ವ್ಯವಸ್ಥೆಗಳು ಫ್ರೀ ಸಿಕ್ಕಿದ್ರೆ ಯಾರೂ ಭೃಷ್ಟಾಚಾರಿಗಳು ಆಗೋದಿಲ್ಲ ಎಂದು ಅವರು ಹೇಳಿದರು.

    ಭಾರತ ದೇಶದಲ್ಲಿ 80% ದೇಶ ಒಳ್ಳೆಯವರಿದ್ದಾರೆ . 80%ಜನರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ.

    ಕೆಪಿಜೆಪಿ ಯ ಒಬ್ಬೊಬ್ಬ ಅಭ್ಯರ್ಥಿಯು ಮುಖ್ಯಮಂತ್ರಿ ತರಹ ಕೆಲಸ ಮಾಡಬೇಕು ಎಂದು ಹೇಳಿದ ಅವರು ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುವ ಮೊದಲು ರಾಜ್ಯಗಳಲ್ಲಿ ವಿಧಾನ ಸಭೆ ಸೇರಿದಂತೆ ಎಲ್ಲಾ ಸ್ಥಳಿಯಾಡಳಿತ ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

    Share Information
    Advertisement
    Click to comment

    You must be logged in to post a comment Login

    Leave a Reply