ಶ್ರೀನಗರ, ಫೆಬ್ರವರಿ 18 : ಉಗ್ರರರು ಆಳವಡಿಸಿದ್ದ ಸುಧಾರಿತ ಸ್ಫೋಟಕವೊಂದನ್ನು ವಸ್ತು ಪತ್ತೆ ಹಚ್ಚುವ ಮೂಲಕ ಸಂಭಾವ್ಯ ಅನಾಹುತವೊಂದನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯ ನರ್ಬಾಲ್ ಎಂಬ ಪ್ರದೇಶದಲ್ಲಿ ಉಗ್ರರು ಈ ಸ್ಫೋಟಕವನ್ನು ಅಳವಡಿಸಿ ಭಾರೀ ದೊಡ್ಡ ಮಟ್ಟದ ಸಂಚು ಮಾಡಲು ಯೋಜನೆಯನ್ನು ರೂಪಿಸಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ನರ್ಬಾಲ್ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಬ್ರೀಫ್ ಕೇಸ್ ಒಂದು ಅನಾಥವಾಗಿ ಬಿದ್ದಿರುವುದನ್ನು ಗಸ್ತಿನಲ್ಲಿದ್ದ ಭದ್ರತಾ ಪಡೆಗಳು ಗಮನಿಸಿದೆ. ಕೂಡಲೇ ಈ ಇಡೀ ಪ್ರದೇಶವನ್ನು ಸುತ್ತುವರಿದ ಸೈನಿಕರು ಬಂದೋಬಸ್ತ್ ಗೊಳಿಸಿ, ಬ್ರೀಫ್ ನಲ್ಲಿದ್ದ ಸ್ಫೋಟಕವನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದೆ.