ಚೆನ್ನೈ ಜನವರಿ 18: ಆಸ್ಕರ್ ಪ್ರಶಸ್ತಿ ವಿಜೇಚ ರೆಹಮಾನ್ ತಾನು ಮುಸ್ಲಿಂ ಎಂಬ ಕಾರಕ್ಕೆ ತನಗೆ ಆಫರ್ ಗಳು ಸಿಗುತ್ತಿಲ್ಲ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ರೆಮಾನ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ದೇಶ ಕಂಡ ಖ್ಯಾತ ಸಿನೆಮಾ ನಿರ್ದೇಶಕ ಎಆರ್ ರೆಹಮಾನ್, 90 ರ ದಶಕದಲ್ಲಿ ತಮ್ಮ ಸಂಗೀತದಿಂದ ಭಾರೀ ಖ್ಯಾತಿ ಪಡೆದಿದ್ದರು, ಬಳಿಕವೂ ಆಸ್ಕರ್ ಅವಾರ್ಡ್ ಪಡೆಯುವ ಮಟ್ಟಕ್ಕೆ ರೆಹಮಾನ್ ಖ್ಯಾತಿ ಗಳಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ನೀಡಿದ ಒಂದು ಹೇಳಿಕೆ ಮಾತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ.
ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣಕ್ಕೆ ನನಗೆ ಆಫರ್ ಸಿಗುತ್ತಿಲ್ಲ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ರೆಹಮಾನ್ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಬಿಸಿ ಏಷ್ಯನ್ ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಮಾತನಾಡಿದರು. ‘ಕಳೆದ ಎಂಟು ವರ್ಷಗಳಿಂದ ನನಗೆ ಹಿಂದಿ ಸಿನಿಮಾ ರಂಗದಲ್ಲಿ ಆಫರ್ಗಳು ಬಂದಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಷಯ ಹಿಂದಿನ ಬಾಗಿಲಿನಿಂದ ನನಗೆ ತಿಳಿಯುತ್ತದೆ. ನಾನು ಕೆಲಸ ಹುಡುಕುತ್ತಾ ಇಲ್ಲ. ಕೆಲಸ ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ರಾಜನಿಂದ ಅಥವಾ ಭಿಕ್ಷುಕನಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಒಳ್ಳೆಯದರಿಂದ ಅಥವಾ ಕೆಟ್ಟದರಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು ಎಂದು ಪ್ರವಾದಿ ಹೇಳಿದ್ದರು. ನಾವು ಸಣ್ಣತನ ಮತ್ತು ಸ್ವಾರ್ಥವನ್ನು ಮೀರಿ ಹೋಗಬೇಕು’ ಎಂದು ರೆಹಮಾನ್ ಹೇಳಿದ್ದಾರೆ.
ಸೃಜನಶೀಲರಲ್ಲದ ಜನರು ಬಾಲಿವುಡ್ನಲ್ಲಿ ವಿಷಯಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದ್ದಾರೆ. ಧರ್ಮದ ವಿಷಯದ ಕಾರಣಕ್ಕೂ ಆಫರ್ ಬರದೆ ಇರಬಹುದು. ಸಿನಿಮಾಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಬರುತ್ತದೆ. ಆದರೆ, ನಂತರ ಮ್ಯೂಸಿಕ್ ಕಂಪನಿ ಅವರದ್ದೇ ಆದ ಐದು ಮ್ಯೂಸಿಕ್ ಕಂಪೋಸರ್ಗಳನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಆಗ ನಾನು ಮನೆಯಲ್ಲಿ ಹಾಯಾಗಿ ವಿಶ್ರಾಂತಿ ಪಡೆಯಬಹುದು’ ಎಂದಿದ್ದಾರೆ ಅವರು. ‘ನಾನು ಮುಸ್ಲಿಂ, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದೆ. ಅಲ್ಲಿ ನಾನು ರಾಮಾಯಣ ಹಾಗೂ ಮಹಾಭಾರತ ಕಲಿತೆ’ ಎಂದಿದ್ದಾರೆ ಅವರು. ಈಗ ಹಿಂದಿಯ ‘ರಾಮಾಯಣ’ ಚಿತ್ರಕ್ಕೆ ಅವರದ್ದೇ ಸಂಗೀತ ಸಂಯೋಜನೆ ಇದೆ.

ಇನ್ನು ರೆಹಮಾನ್ ಹೇಳಿಕೆಗೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ಕೋಮುವಾದದ ಬಗ್ಗೆ ರೆಹಮಾನ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ರಿಯ ರೆಹಮಾನ್ ಜಿ, ನಾನು ಕೇಸರಿ ಪಕ್ಷವನ್ನು ಬೆಂಬಲಿಸುವುದರಿಂದ ಚಿತ್ರರಂಗದಲ್ಲಿ ನಾನು ಬಹಳಷ್ಟು ತಾರತಮ್ಯ ಮತ್ತು ಪಕ್ಷಪಾತವನ್ನು ಎದುರಿಸುತ್ತಿದ್ದೇನೆ. ಆದರೆ ನಾನು ನಿಮ್ಮಂತಹ ಪೂರ್ವಾಗ್ರಹ ಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದು ನಟಿ ಇನ್ ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡರು.