Connect with us

LATEST NEWS

ಮಾನವೀಯತೆಯ ತತ್ವ ಎತ್ತಿ ಹಿಡಿದಿದ್ದಕ್ಕಾಗಿ ಗೌರವ ಸೂಚಿಸಿದ ಕಲಬುರ್ಗಿಯ ನ್ಯಾಯವಾದಿ ವಿಲಾಸ್ ಕುಮಾರ್ 

ಮಾನವೀಯತೆಯ ತತ್ವ ಎತ್ತಿ ಹಿಡಿದಿದ್ದಕ್ಕಾಗಿ ಗೌರವ ಸೂಚಿಸಿದ ಕಲಬುರ್ಗಿಯ ನ್ಯಾಯವಾದಿ ವಿಲಾಸ್ ಕುಮಾರ್ 

ಮಂಗಳೂರು ಜನವರಿ 30: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಹಲ್ಲೆ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರ ಪ್ರಾಣ ರಕ್ಷಿಸಲು ಪ್ರಯತ್ನಿಸಿದ ಇಬ್ಬರು ಯುವಕರಿಗೆ ಕಲ್ಬುರ್ಗಿಯ ನ್ಯಾಯವಾದಿಯೊಬ್ಬರು ಗೌರವ ಸೂಚಿಸಿದ್ದಾರೆ. ತಲಾ 50 ಸಾವಿರ ರೂಪಾಯಿಗಳ ಚೆಕ್ ನ್ನು ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಕಳುಹಿಸಿ ತಮ್ಮ ಗೌರವ ಸಲ್ಲಿಸಿದ್ದಾರೆ.

ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಅವರನ್ನು ರಕ್ಷಿಸಲು ಮುಂದಾಗಿದ್ದ ಅಬ್ದುಲ್ ಮಜೀದ್ ಹಾಗೂ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಗಂಭೀರ ವಾಗಿ ಗಾಯಗೊಂಡಿದ್ದ  ಬಷೀರ್ ಅವರ ಪ್ರಾಣ ರಕ್ಷಿಸಲು ಪ್ರಯತ್ನಿಸಿದ ಶೇಖರ್ ಕುಲಾಲ್ ಅವರಿಗೆ ಮಾನವೀಯತೆಯ ತತ್ವವನ್ನು  ಎತ್ತಿ ಹಿಡಿದಿದ್ದಕ್ಕಾಗಿ  ಕಲಬುರ್ಗಿಯ ನ್ಯಾಯವಾದಿ ವಿಲಾಸ್ ಕುಮಾರ್  ಈ ಇಬ್ಬರು ಯುವಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ  ಜಿಲ್ಲಾಡಳಿತಕ್ಕೆ  ಕಳುಹಿಸಿಕೊಟ್ಟ ಚೆಕ್ ಗಳನ್ನು ಅಬ್ದುಲ್ ಮಜೀದ್ ಹಾಗು ಶೇಖರ್ ಕುಲಾಲ್ ಅವರಿಗೆ ಜಿಲ್ಲಾಡಳಿತದ ಮುಕಾಂತರ ಇಂದು  ಹಸ್ತಾಂತರಿಸಲಾಯಿತು.

ಮಾನವೀಯತೆ ಮೆರೆದವರಿಗೆ  ದೂರದ ಕಲಬುರ್ಗಿ ಯಿಂದ ಬಂದು ತಾನು ಗೌರವ ಸಲ್ಲಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ನ್ಯಾಯವಾದಿ ಪಿ. ವಿಲಾಸ್ ಕುಮಾರ್ ಎಂಬವರು ಜಿಲ್ಲಾಡಳಿತದ ಮೂಲಕ ಈ ಕಾರ್ಯ ನೆರವೇರಿಸುವಂತೆ ಎರಡು ಚೆಕ್ ಗಳನ್ನು ಪತ್ರದೊಂದಿಗೆ ರವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ  ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಅಬ್ದುಲ್ ಮಜೀದ್ ಹಾಗೂ ಶೇಖರ್ ಕುಲಾಲ್ ಅವರಿಗೆ  ಡಿಸಿಪಿ ಹನುಮಂತರಾಯ ಅವರು ತಲಾ 50,000 ರೂ.ಗಳ ಚೆಕ್ಕನ್ನು ಹಸ್ತಾಂತರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *