KARNATAKA
ಪುಟ್ಟ ಕಂದಮ್ಮನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳಕೊಂಡ ಗೃಹಿಣಿ..!
ಚಿಕ್ಕೋಡಿ: ಗೃಹಿಣಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಗಟೊಳ್ಳಿ ಗ್ರಾಮದಲ್ಲಿ ಇಂದು ಭಾನುವಾರ ಸಂಭವಿಸಿದೆ.
ಶಕುಂತಲಾ ಬ್ಯಾಳಿ(31) ಮತ್ತು ಆಕೆಯ ಪುತ್ರ ಭುವನ್ ಬ್ಯಾನ್ ಮೃತ ದುರ್ದೈವಿಗಳಾಗಿದ್ದಾರೆ.
ಮನೆಯ ಪಕ್ಕದಲ್ಲೇ ಇರುವ ಬಾವಿಗೆ ಹಾರಿ ತಾಯಿ ಹಾಗೂ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಏನೂ ಅರಿಯ ಪುಟ್ಟ ಕಂದಮ್ಮನೂ ತಾಯಿ ಜತೆ ಪ್ರಾಣಬಿಟ್ಟಿದ್ದು, ಭಾವಿಯಿಂದ ಇಬ್ಬರ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login