Connect with us

    LATEST NEWS

    ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನುಗ್ಗಿದ ಕಳ್ಳರು…7.21 ಲಕ್ಷ ರೂ ಮೌಲ್ಯದ ಚಿನ್ನ ಕಳವು

    ಉಡುಪಿ ಅಕ್ಟೋಬರ್ 25: ಮನೆಯಲ್ಲಿ ಯಾರೂ ಇಲದ ಸಂದರ್ಭ ನೋಡಿ ನುಗ್ಗಿದ ಕಳ್ಳರು ನಗದು ಚಿನ್ನ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಮಲ್ಪೆಯ ವಡಭಾಂಡೇಶ್ವರ ದೇವಸ್ಥಾನದ ಬಳಿ ನಡೆದಿದೆ.


    ಜಯಲಕ್ಷ್ಮಿ ಎಂಬುವವರು ಅಕ್ಟೋಬರ್ 16 ರಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ ಮಗನ ಮನೆಗೆ ಹೋಗಿದ್ದು, ಈಕೆ ಇಲ್ಲದಿರುವ ಸಮಯದಲ್ಲಿ ನಗದು, ಬೆಳ್ಳಿ, ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದ್ದು, ಅಕ್ಟೋಬರ್ 23 ರಂದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

    ಕಳ್ಳರು ಮನೆಯ ಮುಖ್ಯ ಬಾಗಿಲಿನ ಚಿಲಕವನ್ನು ಒಡೆದು ಒಳ ಪ್ರವೇಶಿಸಿ ಬಳಿಕ ಕೋಣೆಯಲ್ಲಿಟ್ಟಿದ್ದ ಅಲ್ಮೆರಾವನ್ನು ಒಡೆದು 7.21 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಳು ಹಾಗೂ 70,000 ನಗದು ತೆಗೆದುಕೊಂಡು ಹೋಗಿದ್ದಾರೆ.
    ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply