Connect with us

    LATEST NEWS

    ಕುಂದಾಪುರ – ಗ್ಯಾಸ್ ಸಿಲಿಂಡರ್ ಸ್ಪೋಟಕ್ಕೆ ಛಿದ್ರವಾದ ಮನೆ

    ಕುಂದಾಪುರ ಜುಲೈ 06: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಗೆ ಹಾನಿಯಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ನಗರದ ವಿನಾಯಕ ಟಾಕೀಸಿನ ಬಳಿ ಇಂದು ನಡೆದಿದ್ದು, ಘಟನೆಯಲ್ಲಿ ಮನೆಯ ಮಾಲೀಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


    ಕುಂದಾಪುರ ವಿನಾಯಕ ಟಾಕೀಸ್ ನ ಸಮೀಪ ಇರುವ ಮನೆಯಲ್ಲಿ ವಿನ್ಸೆಂಟ್ ಎಂಬವರು ಒಬ್ಬರೇ ವಾಸವಾಗಿದ್ದು, ಮನೆಯಲ್ಲಿ ಅನ್ನ ಮಾಡಿಟ್ಟು, ನಂತರ ಗ್ಯಾಸ್ ಸಿಲಿಂಡರ್ ತರಲು ಪೇಟೆಗೆ ತೆರಳಿದ್ದಾರೆ. ನಂತರ ಮನೆಗೆ ಬಂದ ಅವರು ಅಡುಗೆ ಮಾಡಲು ಮುಂದಾದಾಗ ಬೆಂಕಿ ಹೊತ್ತಿಕೊಂಡಿದ್ದು, ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ವಸ್ತಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿದೆ.


    ಸ್ಪೋಟದ ಶಬ್ದ ಕೇಳಿಸಿದ ಸ್ಥಳೀಯರು ವಿನ್ಸೆಂಟ್ ಮನೆಗೆ ಧಾವಿಸಿ ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply