ದುಬೈ, ಮಾರ್ಚ್ 04: ಇರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ದಾಳಿ ನಡೆಸುತ್ತಿರುವ ಬೆನ್ನಲ್ಲೆ, ಇರಾನ್ ಗಲ್ಪ್ ರಾಷ್ಟ್ರಗಳ ಮೇಲೆ ಮುಗಿಬಿದ್ದಿದ್ದು, ಕ್ಷಿಪಣಿ ಮತ್ತು ಡ್ರೋಣ್ ದಾಳಿ ನಡೆಸುತ್ತಿದೆ. ಈಗಾಗಲೇ ದುಬೈನಲ್ಲಿ ಸಿಲುಕಿರುವ ಭಾರತೀಯರು ಸಿಕ್ಕ ವಿಮಾನಗಳನ್ನು ಏರಿ ದೇಶಕ್ಕೆ ವಾಪಾಸಾಗುತ್ತಿದ್ದಾರೆ. ಈ ನಡುವೆ ಗಾಯಕ ಹನಿ ಸಿಂಗ್ ದುಬೈ ಸದ್ಯ ಶಾಂತವಾಗಿದ್ದು ನಾನು ಸೇಫ್ ಆಗಿದ್ದನೆ ಎಂದು ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಅವರು, “ದುಬೈ ನಗರ ಶಾಂತವಾಗಿದೆ. ಆನ್ಲೈನ್ನಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಸೇಫ್ ಆಗಿದ್ದೇನೆ,” ಎಂದು ತಿಳಿಸಿದ್ದಾರೆ.
ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವ ದೃಶ್ಯವನ್ನೂ ಹಂಚಿಕೊಂಡಿರುವ ಹನಿ ಸಿಂಗ್, ಅಭಿಮಾನಿಗಳಿಗೆ ಯಾವುದೇ ಆತಂಕಪಡಬೇಕಾದ ಪರಿಸ್ಥಿತಿ ಇಲ್ಲವೆಂದು ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ತಮ್ಮ ರೆಕಾರ್ಡಿಂಗ್ ಸ್ಟುಡಿಯೋದಲ್ಲಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದರು.
ಇನ್ನೊಂದೆಡೆ, ಗಾಯಕ Abhijeet Bhattacharya ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಮಗನನ್ನು ದುಬೈನಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಹಾಗೂ ಯುಎಇ ಭಾಗಗಳಲ್ಲಿ ಹಲವಾರು ಭಾರತೀಯರು ತಾತ್ಕಾಲಿಕವಾಗಿ ಸಿಲುಕಿರುವ ಬಗ್ಗೆ ವರದಿಗಳು ಲಭ್ಯವಾಗಿವೆ.