Connect with us

    LATEST NEWS

    ಕುಂದಾಪುರ – ಅಗಲಿದ ನಟ ಪುನೀತ್ ರಾಜ್ ಕುಮಾರ್ ಗೆ ದೀಪ ನಮನ

    ಕುಂದಾಪುರ: ಹೃದಯಾಘಾತದಿಂದ ನಿಧನರಾದ ಕನ್ನಡ ಕಣ್ಮಣಿ ಪವರಸ್ಟಾರ್ ಪನೀತ್ ರಾಜ್ ಕುಮಾವ್ ಅವರಿಗೆ ಕುಂದಾಪುರದ ಡಾ. ರಾಜ್ ಅಭಿಮಾನಿ ಸಂಘಟನೆ ವತಿಯಿಂದ ದೀಪಗಳನ್ನು ಬೆಳಗಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.


    ಹೊಸ ಬಸ್ ನಿಲ್ದಾಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪ್ಪು ಅವರ ನಿಧನದಿಂದಾಗಿ ಒಡ ಹುಟ್ಟಿದ ಸಹೋದರನನ್ನೇ ಕಳೆದು ಕೊಂಡಂತಹ ಶೂನ್ಯ ಭಾವ ಆವರಿಸಿದಂತಾಗಿದೆ.

    ಇಂತಹ ಹೃದಯವಂತ, ಮಾನವೀಯ ಮಹಾ ಚೇತನ ಮರೆಯಾಗಿದ್ದು ಆ ನೋವನ್ನು ವ್ಯಕ್ತಪಡಿಸಲು ಯಾವ ಪದಗಳಿಂದಲೂ ಅಸಾಧ್ಯ ಎಂದು ಪುನೀತ್ ಅಭಿಮಾನಿಗಳು ಕಂಬನಿ ಮಿಡಿದರು. ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೂಡ ದೀಪವನ್ನು ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದು ವಿಶೇಷವಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply