Connect with us

    LATEST NEWS

    ದೇವಸ್ಥಾನಗಳಲ್ಲಿ ಮಕ್ಕಳಿಗೆ ಸಿಗಲಿದೆ ಹಿಂದೂ ಧಾರ್ಮಿಕ ಶಿಕ್ಷಣ…!!

    ಪುತ್ತೂರು ಅಕ್ಟೋಬರ್ 08: ಮದರಸಾಗಳಲ್ಲಿ ನೀಡುವ ಧಾರ್ಮಿಕ ಶಿಕ್ಷಣದಂತೆ ದೇವಸ್ಥಾನದಲ್ಲೂ ಹಿಂದೂ ಧಾರ್ಮಿಕ ಶಿಕ್ಷಣ ನೀಡಲು ಯೋಜಿಸಲಾಗಿದ್ದು, ಸರಕಾರದ ಮುಜರಾಯಿ ಇಲಾಖೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಆರಂಭಗೊಂಡಿದೆ.


    ಸುಜ್ಞಾನ ದೀಪಿಕೆ ಎನ್ನುವ ಹೆಸರಿನಲ್ಲಿ ಧಾರ್ಮಿಕ ಶಿಕ್ಷಣ ಇದಾಗಿದ್ದು, 5 ರಿಂದ 15 ವಯೋಮಿತಿಯ ಎಲ್ಲಾ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ. ಸುಮಾರು 6 ತಿಂಗಳ ಅವಧಿಯ ಶಿಕ್ಷಣದಲ್ಲಿ ವೇದ, ಉಪನಿಷತ್, ಶ್ಲೋಕ ಸೇರಿದಂತೆ ಎಲ್ಲಾ ರೀತಿಯ ಹಿಂದೂ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ.


    ದೇವಸ್ಥಾನ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಪಟ್ಟ ಸಾರ್ವಜನಿಕ ಕಟ್ಟೆಗಳಲ್ಲಿ ಈ ಪಾಠ ಪ್ರವಚನ ನಡೆಯಲಿದೆ. ಈಗಾಗಲೇ 80 ಕ್ಕೂ ಹೆಚ್ಚು ಮಕ್ಕಳು ಧಾರ್ಮಿಕ ಶಿಕ್ಷಣ ಕಲಿಯಲು ಉತ್ಸಾಹ ತೋರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply