ಪತ್ತನಂತಿಟ್ಟ ಜನವರಿ 07:ಕೇರಳದ ಪತ್ತನಂತಿಟ್ಟ ಎಂಬಲ್ಲಿ ಅಪರೂಪದ ಪ್ರಕರಣವೊಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಏನಿದು ವಿಚಿತ್ರ ಅನ್ನಿಸ್ತಾ ಇದೆಯಾ..ಆದರೆ ಇಡೀ ಸ್ಟೋರಿಯಲ್ಲೊಂದು ಭಯಂಕರ ಟ್ವಿಸ್ಟ್ ಇದೆ.
ಅರೆಸ್ಟ್ ಆಗಿರುವ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ಕುಟುಂಬವನ್ನು ಮೆಚ್ಚಿಸಲು ತನ್ನ ಸ್ನೇಹಿತನ ಮೂಲಕ ಯುವತಿಗೆ ಅಪಘಾತ ಮಾಡಿಸಿ ಬಳಿಕ ತಾನು ಬಂದು ಆಕೆಯನ್ನು ರಕ್ಷಣೆ ಮಾಡುವ ರೀತಿ ನಾಟಕವಾಡಿದ್ದಾನೆ. ಆದರೆ ಪೊಲೀಸರು ತನಿಖೆಗೆ ನಡೆಸಿದ ವೇಳೆ ಇದು ಸಾಮಾನ್ಯ ಅಪಘಾತವಲ್ಲ ಎಂದು ತಿಳಿದು ಬಂದಿದ್ದು, ಇದೀಗ ಯುವಕ ಮತ್ತು ಆತನ ಸ್ನೇಹಿತನನ್ನು ಜೈಲಿಗೆ ಕಳುಹಿಸಿದ್ದಾರೆ.

ಬಂಧಿತರು ಕೋನ್ನಿ ಮಮ್ಮೂದ್ ಮೂಲದ ರಂಜಿತ್ ರಾಜನ್ ಮತ್ತು ಕೋನ್ನಿ ಪಯ್ಯನಮೋನ್ ಮೂಲದ ಅಜಾಸ್ ಎಂದು ಗುರುತಿಸಲಾಗಿದೆ.
ಏನಿದು ಘಟನೆ
ಡಿಸೆಂಬರ್ 23 ರಂದು ಸಂಜೆ 5.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರಂಜಿತ್ ಗೆ ಪರಿಚಯವಿದ್ದ ಯುವತಿ ಕೋಚಿಂಗ್ ತರಗತಿಗೆ ಹಾಜರಾಗಿ ಅಡೂರ್ನಿಂದ ಮನೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ವಾಜಮುಟ್ಟಮ್ ತಲುಪಿದಾಗ ಹಿಂದಿನಿಂದ ಬಂದ ಕಾರೊಂದು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.
ಅಪಘಾತ ರಭಸಕ್ಕೆ ರಸ್ತೆಗೆ ಬಿದ್ದ ಯುವತಿಗೆ ಗಂಭೀರ ಗಾಯಗಳಾಗಿತ್ತು. ಸ್ಥಳೀಯರು ಯುವತಿಯ ರಕ್ಷಣೆ ಮಾಡಿ ಉಪಚರಿಸುತ್ತಿದ್ದ ಸಂದರ್ಭ, ಅದೇ ರಸ್ತೆಯಲ್ಲಿ ಕಾರಿನಲ್ಲಿ ಬಂದ ರಂಜಿತ್ ತಾನು ಆಕೆಯ ಗಂಡ ಎಂದು ಅಲ್ಲಿ ಇದ್ದ ಸ್ಥಳೀಯರಿಗೆ ಹೇಳಿ ಆಕೆಯನ್ನು ತನ್ನದೇ ಕಾರಿನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ಮೂಲಕ ಯುವತಿಯ ಹಾಗೂ ಅವರ ಮನೆಯವರ ಸಿಂಪತಿಗಿಟ್ಟಿಸಿಗೊಂಡಿದ್ದಾನೆ.
ಪೊಲೀಸರು ಎಂದಿನಂತೆ ಯುವತಿಯ ಹೇಳಿಕೆ ಪಡೆದು ಅಪಘಾತ ಪ್ರಕರಣ ದಾಖಲಿಸಿದ್ದರು. ಬಳಿಕ ಪರಾರಿಯಾದ ಕಾರಿನ ಬಗ್ಗೆ ತನಿಖೆ ವೇಳೆ ಪೊಲೀಸರು ಅನುಮಾನ ಬಂದಿದೆ. ಅಪಘಾತದ ಸ್ಥಳದಲ್ಲಿ ರಂಜಿತ್ ಜೊತೆ ಅಪಘಾತ ಮಾಡಿದ್ದ ಅಜಾಸ್ ಇದ್ದಿದ್ದು, ಪೊಲೀಸರಿಗೆ ಅನುಮಾನ ಮೂಡಲು ಕಾರಣವಾಗಿತ್ತು, ಬಳಿಕ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ವಿಚಾರಿಸಿದ ವೇಳೆ ಆರೋಪಿಗಳು ಸತ್ಯವನ್ನು ಬಾಯಿಬಿಟ್ಟಿದ್ದಾರೆ.
ರಂಜಿತ್ ಯುವತಿಯ ಹಾಗೂ ಅವರ ಮನೆಯವರ ವಿಶ್ವಾಸಗಳಿಸಲು ತನ್ನ ಸ್ನೇಹಿತನ ಮೂಲಕ ಆಕೆಗೆ ಅಪಘಾತ ಮಾಡಿಸಿದ್ದಾನೆ. ಬಳಿಕ ತಾನು ರಕ್ಷಣೆ ಮಾಡುವ ನೆಪದಲ್ಲಿ ಯುವತಿಯ ಮನೆಯವರಿಗೆ ಹತ್ತಿರವಾಗಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಅಪಘಾತ ಪ್ರಕರಣವನ್ನು ಕೊಲೆಯತ್ನದ ಪ್ರಕರಣವಾಗಿ ಬದಲಾಯಿಸಿ ಇಬ್ಬರನ್ನು ಜೈಲಿಗೆ ತಳ್ಳಿದ್ದಾರೆ. ಯುವತಿಯ ಮನೆಯವರ ಎದುರು ಹಿರೋ ಆಗಲಿಕ್ಕೆ ಹೋದವನ ಇದೀಗ್ ವಿಲನ್ ಆಗಿದ್ದಾನೆ.



