LATEST NEWS
ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರಲ್ಲಿ ಓರ್ವ ಸೇನಾಧಿಕಾರಿ ಕಾರ್ಕಳದ ಅಳಿಯ
ಉಡುಪಿ ಡಿಸೆಂಬರ್ 09: ಊಟಿ ಸಮೀಪ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹುತಾತ್ಮರಾದ 13 ಮಂದಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರು ಒಬ್ಬರಾಗಿದ್ದು, ಅವರಿಗೂ ಕರ್ನಾಟಕದ ಉಡುಪಿಗೂ ಅವಿನಾಭಾವ ಸಂಬಂಧವಿದೆ.
ಇವರು ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ದಿ.ಫಿಲಿಪ್ಸ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ಅವರ ಪುತ್ರಿ ಕ್ಯಾ.ಪ್ರಫುಲ್ಲಾ ಮಿನೇಜಸ್ ಅವರ ಪತಿ ಎಂದು ತಿಳಿದು ಬಂದಿದೆ. ಪ್ರಫುಲ್ಲಾ ಮಿನೇಜಸ್ ಪ್ರೀತಿಸಿ ಲೆ.ಕ ಹರ್ಜಿಂದರ್ ಸಿಂಗ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ಲೆ.ಕ ಸಿಂಗ್ ಅವರು ಕಾರ್ಕಳದ ಮಾವನ ಮನೆಗೂ ಬಂದಿದ್ದರು ಎಂದು ಪ್ರಫುಲ್ಲಾ ಮಿನೇಜಸ್ ಅವರ ಬಂಧುಗಳು ಹೇಳಿದ್ಧಾರೆ.
ಇದೀಗ ಅನಿರೀಕ್ಷಿತ ಘಟನೆಯಲ್ಲಿ ಹರ್ಜಿಂದರ್ ಸಿಂಗ್ ಹುತಾತ್ಮರಾಗಿರುವುದನ್ನು ನೋಡಿ ಸಾಲ್ಮರದ ಮಿನೇಜಸ್ ಕುಟುಂಬ ದುಃಖ ತಪ್ತರಾಗಿದೆ. ಮೃತ ಸಿಂಗ್ ಅವರನ್ನು ನೆನೆದು ಕುಟುಂಬ ಕಣ್ಣೀರು ಹಾಕಿದೆ. ಪ್ರಫುಲ್ಲಾ ಅವರ ತಾಯಿ ಮೇರಿ ಹಾಗೂ ಅವರ ಅಕ್ಕ-ಬಾವ ಬೇಸರ ವ್ಯಕ್ತಪಡಿಸಿದ್ದಾರೆ.
You must be logged in to post a comment Login