DAKSHINA KANNADA
ವಾಯುಭಾರ ಕುಸಿತ ಸುಳ್ಯದಲ್ಲಿ ಗುಡುಗು ಸಿಡಿಲಿನೊಂದಿಗೆ ನಿರಂತರವಾಗಿ ಸುರಿದ ಮಳೆ
ವಾಯುಭಾರ ಕುಸಿತ ಸುಳ್ಯದಲ್ಲಿ ಗುಡುಗು ಸಿಡಿಲಿನೊಂದಿಗೆ ನಿರಂತರವಾಗಿ ಸುರಿದ ಮಳೆ
ಸುಳ್ಯ ಮೇ.14: ಬಂಗಾಳಕೊಲ್ಲಿ ವಾಯುಭಾರ ಕುಸಿತ ದಕ್ಷಿಣಕನ್ನಡ ಜಿಲ್ಲೆಗೆ ಭಾರಿ ಹೊಡೆತವನ್ನೇ ನೀಡುತ್ತಿದೆ. ಕಳೆದ 10 ದಿನಗಳಿಂದೀಚೆಗೆ ಸುರಿಯುತ್ತಿರುವ ಗಾಳಿ ಮಲೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಅನಾಹುತವನ್ನೆ ಸೃಷ್ಠಿಸಿದೆ. ಸ್ಟೇ ಹೋಮ್ ಅನ್ನೊದು ಈ ಗಾಳಿ ಮಳೆ ಮನೆಯೇ ಇಲ್ಲದಂತೆ ಮಾಡಿದೆ.
ಇಂದು ಸಂಜೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ .ನಿರಂತರ ಒಂದು ಗಂಟೆಗಳ ಕಾಲ ಭಾರಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಸುರಿಯಿತು. ಸಂಜೆ ವೇಳೆ ಬೀಸಿದ ಭಾರಿ ಗಾಳಿ ಮಳೆಗೆ ಸುಬ್ರಹ್ಮಣ್ಯ ಸುತ್ತಮುತ್ತಲ ಕೆಲವು ಪ್ರದೇಶಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ ಉಂಟಾಯಿತು .ಅಲ್ಲದೆ ಕೆಲವು ಮನೆಗಳಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ಗಳು ಗಾಳಿಗೆ ಹಾರಿ ಹೋಗಿದೆ.
ಸುಬ್ರಹ್ಮಣ್ಯದ ಬಿಲದ್ವಾರದ ವಾಲಗದ ಕೇರಿ ನಿವಾಸಿ ಆನಂದ ಎಂಬವರ ಮನೆಯ ಮೇಲೆ ಗಾಳಿಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಗಾಳಿಗೆ ವಿದ್ಯುತ್ ಕಂಬ, ತಂತಿ, ಮರಗಳು ನೆಲಕ್ಕುರಳಿವೆ. ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶ ಹಾಗೂ ಕುಮಾರ ಪರ್ವತ ಭಾಗಗಳಲ್ಲಿ ಭಾರಿ ಗಾಳಿ ಮಳೆಯಾಯಿತು .ಮಳೆಯ ನೀರಿನಿಂದ ಬರಿದಾಗಿದ್ದ ನದಿ ಹಳ್ಳ ,ತೊರೆಗಳು ಸ್ವಲ್ಪ ಮಟ್ಟಿಗೆ ತುಂಬಿ ಹರಿಯುವಂತಾಯಿತು. ಸುಬ್ರಹ್ಮಣ್ಯ ಅಲ್ಲದೇ ಹರಿಹರ ,ಕೊಲ್ಲಮೊಗ್ರು ,ಬಾಳುಗೋಡು ,ಗುತ್ತಿಗಾರು ,ಬಳ್ಪ ಬಿಳಿನೆಲೆ ,ಪಂಜ , ಕೈಕಂಬ,ನೆಲ್ಯಾಡಿ ಕಡೆಗಳಲ್ಲಿ ಕೂಡ ಬಾರಿ ಗಾಳಿ ಮಳೆಯಾಗಿದೆ.
ಅಲ್ಲದೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ರಸ್ತೆ ಅಗಲೀಕರಣ ಹಾಗೂ ಮೋರಿ ಕಾಮಗಾರಿ ನಡೆಯುತ್ತಿದ್ದು ಜೋರಾಗಿ ಸುರಿದ ಮಳೆ ನೀರಿನಿಂದ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಹಾಗೂ ಮುಖ್ಯ ರಸ್ತೆಯ ಕುಮಾರದಾರ ಭಾಗಗಳಲ್ಲಿ ಮಳೆ ನೀರು ನಿಂತು ದ್ವೀಪ ದಂತಾಯಿತು .ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು.
You must be logged in to post a comment Login