Connect with us

    LATEST NEWS

    ತುಳು ಭಾಷೆ ಟ್ವೀಟ್ ಅಭಿಯಾನ – ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ ನೆಟ್ಟಿಗರು…!!

    ಮಂಗಳೂರು ಜೂನ್ 13: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಹಾಗೂ ಕರ್ನಾಟಕ ಮತ್ತು ಕೇರಳದಲ್ಲಿ ತುಳು ಭಾಷೆಯನ್ನು ಅಧಿಕೃತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಇಂದು ಟ್ವೀಟರ್ ನಲ್ಲಿ ಅಭಿಯಾನ ನಡೆಯುತ್ತಿದೆ.#TuluOfficialinKA_KL ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಜನರು ಟ್ವೀಟ್ ಮಾಡುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಅಭಿಯಾನ ರಾತ್ರಿ 12ರವರೆಗೆ ನಡೆಯಲಿದೆ.


    ಇನ್ನು ಟ್ವೀಟ್ ರನಲ್ಲಿ ಈ ಬಾರಿ ಜನಪ್ರತಿನಿಧಿಗಳ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೇವಲ ಟ್ಲೀಟರ್ ನಲ್ಲಿ ಆಶ್ವಾಸನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಈ ಟ್ವೀಟ್ ಅಭಿಯಾನಕ ಬೆಳಿಗ್ಗೆಯಿಂದ ಟ್ರೆಂಡಿಂಗ್ ನಲ್ಲಿದ್ದು, ಲಕ್ಷಾಂತರ ಜನ ಈ ಅಭಿಯಾನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ತುಳು ಭಾಷೆಗೆ ಮಾನ್ಯತೆ ಕೋರಿ ಟ್ವೀಟ್ ಮಾಡಿರುವವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕರಾವಳಿ ಭಾಗದ ಸಂಸದರನ್ನು ಟ್ಯಾಗ್ ಮಾಡಲಾಗಿದೆ.


    ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.


    ಈ ವಿಚಾರವಾಗಿ ತುಳುವಿನಲ್ಲಿ ಟ್ವೀಟ್ ಮಾಡಿದ ಅವರು ನನ್ನ ಮಾತೃ ಭಾಷೆಗೆ ರಾಜ್ಯ ಭಾಷೆ ಸಂಬಂಧ ನಡೆಯುವ ಆಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.


    ಕಟೀಲ್ ಟ್ವೀಟ್‍ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಮಾತಿನಲ್ಲಿ ಮಾತ್ರ ಈ ಹೇಳಿಕೆ ಬರುತ್ತಿದೆ. ಕೃತಿಯಲ್ಲಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.
    ನಮ್ಮ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಮಾಡಬೇಕಾದುದನ್ನು ಪ್ರತಿ ಬಾರಿಯೂ ಟ್ವಿಟ್ಟರಿನಲ್ಲಿ ನಮ್ಮ ಹಾಗೆ ಮನವಿ ಮಾಡುವುದಾದರೆ ಅಧಿವೇಶನದಲ್ಲಿ ತುಳುವಿಗಾಗಿ ಧ್ವನಿ ಎತ್ತುವವರು ಯಾರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply