LATEST NEWS
ಗುರುಪುರ – ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಚಾಲಕರ ಸಾವು
ಮಂಗಳೂರು ಡಿಸೆಂಬರ್ 05 : ಎರಡು ಲಾರಿಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರಿಬ್ಬರೂ ಸಾವನಪ್ಪಿರುವ ಘಟನೆ ಮಂಗಳೂರು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಂದು ಬೆಳಿಗ್ಗೆ ನಡೆದಿದೆ.
ಅಪಘಾತದ ಪರಿಣಾಮ ಟಿಪ್ಪರ್ ಮಾಲಕ ಹಾಗೂ ಚಾಲಕ ಕಾವೂರು ಮೂಲದ ಲೋಕನಾಥ್ ಮೃತಪಟ್ಟಿದ್ದಾರೆ. ಮತ್ತೊಬ್ಬರ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಮೂಡುಬಿದಿರೆ ಕಡೆಯಿಂದ ಮಣ್ಣು ಹೊತ್ತು ಗುರುಪುರ ಕಡೆಗೆ ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ, ಲಾರಿಯ ಬ್ರೇಕ್ ಪೈಲ್ ಆಗಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಂದು ಲಾರಿ ಪಲ್ಟಿಯಾಗಿದೆ ಹಾಗೂ ಇನ್ನೊಂದು ಲಾರಿ ರಸ್ತೆ ಬದಿಯ ಹೊಂಡಕ್ಕೆ ಇಳಿದಿದೆ.
ಅಪಘಾತದ ತೀವೃತೆಗೆ ಲಾರಿ ಚಾಲಕರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login