UDUPI
ಬೋನಿಗೆ ಬಿದ್ದ ಗುಂಪಾಗಿ ದಾಳಿ ಮಾಡುತ್ತಿರುವ ಚಿರತೆಗಳು
ಬೋನಿಗೆ ಬಿದ್ದ ಗುಂಪಾಗಿ ದಾಳಿ ಮಾಡುತ್ತಿರುವ ಚಿರತೆಗಳು
ಉಡುಪಿ ಡಿಸೆಂಬರ್ 28: ಹಗಲು ಹೊತ್ತಿನಲ್ಲಿ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ 3 ಚಿರತೆಗಳಲ್ಲಿ 2 ಚಿರತೆಗಳನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಎರಡು ಚಿರತೆಗಳು ಬಿದ್ದಿವೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಪರಿಸರದಲ್ಲಿ ಇತ್ತೀಚೆಗೆ 3 ಚಿರತೆಗಳು ಗುಂಪಾಗಿ ದಾಳಿ ನಡೆಸಿದ್ದವು, ಇಲ್ಲಿಯವರೆಗೆ ಗ್ರಾಮದ ಪರಿಸರದಲ್ಲಿ ಸುಮಾರು 20 ಹಸು 15 ಸಾಕು ನಾಯಿ ಸೇರಿದಂತೆ ಬೆಕ್ಕುಗಳನ್ನು ಚಿರತೆಗಳು ಬೇಟೆಯಾಡಿದ್ದವು.
ಇತ್ತೀಚೆಗೆ ಮೊಳಹಳ್ಳಿ ಗ್ರಾಮದ ಗುಲಾಬಿ ಕುಲಾಲ್ತಿ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ದಾಳಿ ಮಾಡಿದ್ದವು. ಚಿರತೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿರುವುದರಿಂದ ಕಂಗೆಟ್ಟ ಸ್ಥಳೀಯರು ಭಯಭೀತರಾಗಿದ್ದು, ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೆ ನಿಲ್ಲಿಸಿದ್ದರು.
ಚಿರತೆಗಳು ಗುಂಪಾಗಿ ದಾಳಿ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಒಂದು ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೆ ಚಿರತೆಗಾಗಿ ಬೋನಿರಿಸಲಾಗಿದೆ.
ಈ ಭಾಗದಲ್ಲಿ ನಿರಂತರವಾಗಿ ಚಿರತೆಗೆ ಹಾವಳಿಗೆ ಒಳಗಾಗುತ್ತಿರುವ ಹೈನುಗಾರ ಕೃಷಿಕರು, ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮಕ್ಕಾಗಿ ಸರಕಾರವನ್ನು ಆಗ್ರಹಿಸಿದ್ದಾರೆ.
Facebook Comments
You may like
ಏರ್ ಗನ್ ಇಟ್ಟುಕೊಂಡಿದ್ದಕ್ಕೆ ಕೃಷಿಕನ್ನು ಬಂಧಿಸಿದ ಅಮಾಸೆಬೈಲ್ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ
ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಮರವೇರಿ ಕುಳಿತಿದ್ದ ಚಿರತೆ ಸೆರೆ
ಕಡಬದಲ್ಲಿ ಚಿರತೆ ದಾಳಿ ಇಬ್ಬರು ಆಸ್ಪತ್ರೆಗೆ ದಾಖಲು
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ತಲವಾರು ದಾಳಿ
ಬುಲೆಟ್ ಗೆ ಡಿಕ್ಕಿ ಹೊಡೆದ ಕಾರು: ಬುಲೆಟ್ ಸವಾರರಿಬ್ಬರು ಸಾವು
ಬುದ್ದಿವಂತರ ಜಿಲ್ಲೆಯಲ್ಲಿ ಗಬ್ಬು ನಾರುತ್ತಿರುವ ಕಸಬಾ ಗ್ರಾಮದ ಸುಡುಗಾಡು ತೋಡು..ಕೊಳಗೇರಿಯಾಗಿ ಮಾಡಲು ಹೊರಟ ಕುಂದಾಪುರ ಪುರಸಭೆ
You must be logged in to post a comment Login