LATEST NEWS
ಕರಾವಳಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಗೋ ಕಳ್ಳತನ ಪ್ರಕರಣ
ಉಡುಪಿ, ನವೆಂಬರ್ 11: ಕರಾವಳಿಯಲ್ಲಿ ಮತ್ತೆ ರಾಜಾರೋಷವಾಗಿ ಗೋ ಕಳ್ಳತನ ಮುಂದುವರಿದಿದೆ. ನಗರದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗೋ ಕಳ್ಳತನ ನಡೆದಿದದಿದ್ದು. ಬ್ರಹ್ಮಾವರ ತಾಲೂಕಿನ ಸೈಬರ್ ಕಟ್ಟೆಯಲ್ಲಿ ಗೋ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೈಬರ್ ಕಟ್ಟೆ ಸರ್ಕಲ್ ಬಳಿಯ ಬಿಡಾಡಿ ಬಳಿ ಹಸುವನ್ನು ಕಳ್ಳರು ಕದ್ದೋಯ್ಯಿದ್ದು, ಕೋಟದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಇಲ್ಲದಿವುದನ್ನು ಖಚಿತ ಪಡಿಸಿಕೊಂಡು ಕೃತ್ಯ ಎಸಗಲಾಗಿದೆ.
ಸೈಬರ್ ಕಟ್ಟೆ ಸ್ವಾಗತ ಮುಂಭಾಗದಲ್ಲಿದ್ದ ಎರಡು ಗೋವುಗಳನ್ನು ಕಳ್ಳರು ಕದ್ದೋಯ್ಯಿದ್ದು, ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಗೋವುಗಳನ್ನು ಕಾರಿಗೆ ತುಂಬಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Video:
You must be logged in to post a comment Login