DAKSHINA KANNADA
ಮುಖದ ಮೇಲೆ ಹೆಚ್ಚಾದ ಮೊಡವೆ ಮನನೊಂದು ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಪುತ್ತೂರು ಜನವರಿ 2: ಮುಖದ ಮೇಲಿನ ಮೊಡವೆ ಹೆಚ್ಚಿದರಿಂದ ಮನನೊಂದು ಶಾಲಾ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಪಾಲ್ತಾಡಿ ಗ್ರಾಮದ ನೇರೋಲ್ತಡ್ಕ ರಾಮ ಎಂಬವರ ಪುತ್ರಿ ದಿವ್ಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ.
ಶುಕ್ರವಾರ ಶಾಲಾ ಆರಂಭವಾಗಿದ್ದರಿಂದ ಶಾಲೆಗೆ ಹೋಗುವುದಾಗಿ ಹೇಳಿ ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿ ಮರವೊಂದಕ್ಕೆ ಚೂಡಿದಾರದ ಶಾಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮುಖದ ಮೇಲಿನ ಮೊಡವೆಯಿಂದ ದಿವ್ಯಾ ಅವರು ಯಾರ ಮನೆಗೂ,ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ.ಶಾಲಾ ಆರಂಭವಾದರಿಂದ ಶಾಲೆಗೆ ಮೊಡವೆ ಹೊತ್ತ ಮುಖ ಹಿಡಿದುಕೊಂಡು ಹೇಗೆ ಹೋಗುವುದೆಂದು ಮನನೊಂದಿದ್ದಳು ಎಂದು ತಿಳಿದು ಬಂದಿದೆ.
You must be logged in to post a comment Login