Connect with us

    LATEST NEWS

    ಮಂಗಳೂರು – ವಿಚಾರಣಾಧೀನ ಕೈದಿ ಬಳಿ ಗಾಂಜಾ ಪತ್ತೆ

    ಮಂಗಳೂರು ಜನವರಿ 25: ನ್ಯಾಯಾಲಯಕ್ಕೆ ಹಾಜರು ಪಡಿಸಿ ಮರಲಿ ಕಾರಾಗೃಹಕ್ಕೆ ಕರೆತಂದ ವಿಚಾರಣಾಧೀನ ಕೈದಿ ಬಳಿ ಗಾಂಜಾ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದೀಗ ಕೈದಿ ವಿರುದ್ದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಅಸ್ರು ಯಾನೆ ಮುಹಮ್ಮದ್ ಅಲಿ ಎಂಬಾತನನ್ನು ಪ್ರಕರಣವೊಂದ ರ ವಿಚಾರಣೆ ಸಲುವಾಗಿ ಬಂಟ್ವಾಳದ ನ್ಯಾಯಾಲಯಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಸೋಮವಾರ ಕಳುಹಿಸಿಕೊಡಲಾಗಿತ್ತು. ಆತನನ್ನು ಮರಳಿ ಕಾರಾಗೃಹಕ್ಕೆ ಕರೆತಂದಾಗ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆಗ ಆತನ ಬಳಿ ಗಾಂಜಾ ಇದ್ದ ಪೊಟ್ಟಣ ಪತ್ತೆಯಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply