Connect with us

    DAKSHINA KANNADA

    ಅಂತ್ಯಸಂಸ್ಕಾರ ವಿಚಾರ: ಶರಣ್ ಪಂಪ್​ವೆಲ್​ಗೆ ಜೀವ ಬೆದರಿಕೆ

    ಮಂಗಳೂರು, ಮೇ11 : ಶವಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್ ನೀಡದ ಹೇಳಿಕೆ ಬಳಿಕ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

    ಅಂತ್ಯಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಅಗತ್ಯವಿಲ್ಲ. ಕರಾವಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವವರಿದ್ದಾರೆ ಎಂದು ಶರಣ್ ಪಂಪ್​ವೆಲ್ ಹೇಳಿದ್ದರು. ಈ ಹೇಳಿಕೆಯ ಪೋಸ್ಟರ್ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳೂ ನಡೆದಿತ್ತು.

    ಇದರ ಬಳಿಕ ಕಳೆದ ಎರಡು ದಿನಗಳಿಂದ ಶರಣ್ ಪಂಪ್​ವೆಲ್​ಗೆ ವಿದೇಶದಿಂದ ಇಂಟರ್ನೆಟ್ ಕಾಲ್ ಮತ್ತು ಫೋನ್ ಮೂಲಕ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ. ಈ ಬಗ್ಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಅವರು ದೂರು‌ ನೀಡಿದ್ದು, ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply