Connect with us

    KARNATAKA

    ಕಾರು ಪಲ್ಟಿ – ಪ್ರಾಣಾಪಾಯದಿಂದ ಮಾಜಿ ಶಾಸಕ ಟಿಬಿ ಜಯಚಂದ್ರ ಪಾರು

    ತುಮಕೂರು, ಎಪ್ರಿಲ್ 20: ಪ್ರಾಣಾಪಾಯದಿಂದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಟಿಬಿ ಜಯಚಂದ್ರ ಪಾರಾಗಿದ್ದಾರೆ. ಶಿರಾ ಕ್ಷೇತ್ರದ‌ ಕಾಂಗ್ರೆಸ್ ಮಾಜಿ ಶಾಸಕ ಜಯಚಂದ್ರ ರಾತ್ರಿ ಬೆಂಗಳೂರಿಗೆ ಫಾರ್ಚುನರ್ ಕಾರಿನಲ್ಲಿ ತೆರಳುತ್ತಿದ್ದರು.

    ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚರಿಸುತ್ತಿದ್ದ ಕಾರು ರಾತ್ರಿ 1 ಗಂಟೆಯ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ತುಮಕೂರು ತಾಲೂಕಿನ ಸಿಬಿ ಬಳಿ ಕಾರು ಉರುಳಿಬಿದ್ದಿದ್ದು, ಟಿಬಿ ಜಯಚಂದ್ರ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.

    ಗಾಯಗೊಂಡ ಜಯಚಂದ್ರ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗನ್ ಮ್ಯಾನ್ ಹಾಗೂ‌‌ ಕಾರು ಚಾಲಕ ಅಪಘಾತದಿಂದ ಪಾರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply